ಬಾನಾಡಿ
Tuesday, December 13, 2011
Monday, November 7, 2011
Thursday, November 3, 2011
ಹಣ್ಣೆಲೆ
ಆ ದೊಡ್ಡ ಮರದ ಕೊಂಬೆಯಿಂದ
ಹಣ್ಣೆಲೆಯೊಂದು ಬಿದ್ದಾಗ
ಉಳಿದ ಎಲೆಗಳು ಸದ್ದಾಯಿತೆಂದು ಬೆಚ್ಚಿಬೀಳಲಿಲ್ಲ
ಬದಲು ಬೆಳೆಯುವ ಕೊಂಬೆಯಂಚಿನಲಿ
ಚಿಗುರೆಲೆಯೊಂದಕೆ ಜಾಗವಾಯಿತೆಂದು ಸುಮ್ಮನೆ
ಗಾಳಿಗೆ ತಲೆಯಲ್ಲಾಡಿಸಿದವು
ಅದೆಷ್ಟೋ ಹಣ್ಣೆಲೆಗಳನು ಕಳಚಿ
ಹೊಸ ಚಿಗುರನು ಅರಳಿಸಿ
ಆಕಾಶ ತುಂಬಾ ನಗುವನು, ಬುಡ ತುಂಬಾ ನೆರಳನು
ಹಂಚಿ ಬೆಳೆದಿತ್ತು ಮರ
ಬಿದ್ದ ಎಲೆ ಮಾತ್ರ
ಮರದ ಮೇಲೆ ಹೊದ್ದುಕೊಂಡ ಬಿಸಿಲು ಹೀರಿ
ಆ ಸಂಜೆಯ ಸೂರ್ಯನನು ತನ್ನೊಳಗಿಳಿಸಿ ಹಳದಿಯಾಗಿತ್ತು
ಮರದೆತ್ತರದಿಂದ ಸೂರ್ಯನನು ಹಿಡಿದ
ಹಸಿರು ದಿನಗಳ ನೆನೆಯುತ್ತಾ ಎಲೆ
ತುಟಿಯುದ್ದ ಮಾಡಿ ಮುತ್ತಿಟ್ಟ ಕ್ಷಣವನು
ಆ ತಂಪು ಗಾಳಿಗೆ ಮತ್ತೆ ನೆನೆಯಿತು
ಆ ಕಪ್ಪು ಸೆರಗಿನಲಿ ಸೂರ್ಯ ಮುತ್ತಿಟ್ಟಾಗ
ಮೋಡದೊಡನೆ ಆಡಿದ ಜಗಳಕೆ
ಸಿಟ್ಟಿನ ಕಾವು ಮೋಡದ ಕಣ್ಣೀರಾಯಿತು
ಮುತ್ತಿಟ್ಟ ಸೂರ್ಯ ಕರಗಿಸಿಯೇ ಬಿಟ್ಟ
ಮೋಡ ಕರಗಿ ಸುರಿದ ಮಳೆಯಲಿ
ಹಣ್ಣೆಲೆ ಹಾಯಾಗಿ ಈಜಾಡಿತು
ಹಣ್ಣೆಲೆಯೊಂದು ಬಿದ್ದಾಗ
ಉಳಿದ ಎಲೆಗಳು ಸದ್ದಾಯಿತೆಂದು ಬೆಚ್ಚಿಬೀಳಲಿಲ್ಲ
ಬದಲು ಬೆಳೆಯುವ ಕೊಂಬೆಯಂಚಿನಲಿ
ಚಿಗುರೆಲೆಯೊಂದಕೆ ಜಾಗವಾಯಿತೆಂದು ಸುಮ್ಮನೆ
ಗಾಳಿಗೆ ತಲೆಯಲ್ಲಾಡಿಸಿದವು
ಅದೆಷ್ಟೋ ಹಣ್ಣೆಲೆಗಳನು ಕಳಚಿ
ಹೊಸ ಚಿಗುರನು ಅರಳಿಸಿ
ಆಕಾಶ ತುಂಬಾ ನಗುವನು, ಬುಡ ತುಂಬಾ ನೆರಳನು
ಹಂಚಿ ಬೆಳೆದಿತ್ತು ಮರ
ಬಿದ್ದ ಎಲೆ ಮಾತ್ರ
ಮರದ ಮೇಲೆ ಹೊದ್ದುಕೊಂಡ ಬಿಸಿಲು ಹೀರಿ
ಆ ಸಂಜೆಯ ಸೂರ್ಯನನು ತನ್ನೊಳಗಿಳಿಸಿ ಹಳದಿಯಾಗಿತ್ತು
ಮರದೆತ್ತರದಿಂದ ಸೂರ್ಯನನು ಹಿಡಿದ
ಹಸಿರು ದಿನಗಳ ನೆನೆಯುತ್ತಾ ಎಲೆ
ತುಟಿಯುದ್ದ ಮಾಡಿ ಮುತ್ತಿಟ್ಟ ಕ್ಷಣವನು
ಆ ತಂಪು ಗಾಳಿಗೆ ಮತ್ತೆ ನೆನೆಯಿತು
ಆ ಕಪ್ಪು ಸೆರಗಿನಲಿ ಸೂರ್ಯ ಮುತ್ತಿಟ್ಟಾಗ
ಮೋಡದೊಡನೆ ಆಡಿದ ಜಗಳಕೆ
ಸಿಟ್ಟಿನ ಕಾವು ಮೋಡದ ಕಣ್ಣೀರಾಯಿತು
ಮುತ್ತಿಟ್ಟ ಸೂರ್ಯ ಕರಗಿಸಿಯೇ ಬಿಟ್ಟ
ಮೋಡ ಕರಗಿ ಸುರಿದ ಮಳೆಯಲಿ
ಹಣ್ಣೆಲೆ ಹಾಯಾಗಿ ಈಜಾಡಿತು
Labels:
kannada poem
Sunday, September 4, 2011
ಮದ್ದಿಲ್ಲದ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಗೆ ಅಣ್ಣಾ ಹಜಾರೆಯೆಂಬ ಇಂಜೆಕ್ಷನ್
ಮದ್ದಿಲ್ಲದ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಗೆ ಅಣ್ಣಾ ಹಜಾರೆಯೆಂಬ ಇಂಜೆಕ್ಷನ್
ಎರಡನೇ ತಲೆಮಾರಿನ ತರಂಗಾಂತರಂಗ ಹಗರಣ, ಕಾಮನ್ವೆಲ್ತ್ ಹಗರಣ, ಆದರ್ಶ ಸೊಸೈಟಿ ಹಗರಣ ಮುಂತಾದ ಭ್ರಷ್ಟಾಚಾರ ಕ್ಯಾನ್ಸರ್ ಗುಳ್ಳೆಗಳಿಂದ ತತ್ತರಿಸುತ್ತಿರುವ ಕೇಂದ್ರ ಸರಕಾರದ ಅವಸ್ಥೆಯನ್ನು ಕಂಡು ದೇಶದ ಒಂದು ವರ್ಗದ ಜನರು ಸಿನಿಕರಾಗಿ ಹೋದರೆ ಇನ್ನೊಂದು ವರ್ಗದ ಜನ ಒಳಗಿಂದೊಳಗೆ ತತ್ತರಿಸುತ್ತಿದ್ದರು.
ವಿಶ್ವಮಟ್ಟದ ಪ್ರಖ್ಯಾತ ಅರ್ಥಶಾಸ್ತ್ರ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರ ಮನಸ್ಸೂ ವಿಚಲಿತವಾದಂತೆ ಇತ್ತು. ಪ್ರಧಾನಿಯ ಕುರ್ಚಿಯ ನಾಲ್ಕು ಕಾಲುಗಳು ಗಟ್ಟಿಮುಟ್ಟಾಗಿದ್ದರೂ ಅದರಲ್ಲಿ ಕುಳಿತುಕೊಳ್ಳುವ ಮೆತ್ತೆಯ ಹಾಸಿನಲ್ಲಿ ಮುಳ್ಳುಗಳು ಅವರನ್ನು ಚುಚ್ಚುತ್ತಿದ್ದಾವೆ. ಚುಚ್ಚುವ ಕುರ್ಚಿಯಿಂದ ಎದ್ದು ನಿಂತು ತನ್ನ ಪಾಡನ್ನು ಹೇಳಲು ಅವರಿಗೆ ಅವರ ಮನೋಸ್ಥಿತಿಯ ಸ್ನೇಹಿತರಾಗಲೀ, ಸಲಹಾಗಾರರಾಗಲೀ ಸದ್ಯ ಸರಕಾರದಲ್ಲಿ ಅಥವಾ ಪಕ್ಷದಲ್ಲಿ ಯಾರೂ ಇಲ್ಲ. ಎಲ್ಲವನ್ನು ಮೂಕವಾಗಿ ಅನುಭವಿಸುತ್ತಿರುವ ಮನಮೋಹನ ಸಿಂಗ್ ಅವರನ್ನು ಜನ ’ಮೂಕ ಪ್ರಧಾನಿ’ ಎಂದು ಮೂದಲಿಸುತ್ತಿದ್ದಾರೆ.
ಇಂತಹ ಪ್ರಧಾನಿಯವರ ಮೂಕ ವೇದನೆಯನ್ನು ಅರಿತು ಅದರ ಹಲವು ಕಾರಣಗಳಲ್ಲಿ ಒಂದಾದ ಭ್ರಷ್ಟಾಚಾರದ ಕುರಿತು ಸಮಾಲೋಚಿಸಿ ಸಲಹೆ ನೀಡಲು ದೂರದ ಮಹಾರಾಷ್ಟ್ರದ ರಾಳೇಗಣ ಸಿದ್ದಿಯ ಮುದುಕ ಕಿಶನ್ ಬಾಪಟ್ ಬಾಬೂರಾವ್ ಕಳೆದ ವರ್ಷ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಪ್ರಧಾನಿ ನಿವಾಸದಲ್ಲಿ ಹಲವು ಗಂಟೆಗಳಷ್ಟು ಕಾಲ ಕುಳಿತು ಚರ್ಚಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರ ಗಂಟಿಕ್ಕಿದ ಮುಖದಲ್ಲಿ ನಗು ಹುಟ್ಟಿಸುವಂತಹ ಕೆಲಸ ಮಾಡಲು ಅವರು ತಯಾರಿದ್ದರು. ಕುರ್ಚಿಯ ಮೆತ್ತೆಯ ಮೇಲಿನ ಮುಳ್ಳುಗಳನ್ನು ಕಿತ್ತೆಸೆಯಲು ಉಪಾಯಗಳನ್ನು ಹುಟ್ಟುಹಾಕಿದ್ದರು. ಅವುಗಳಲ್ಲಿ ಒಂದು, ಕಳೆದ ನಾಲ್ಕು ದಶಕಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಲೋಕಪಾಲ್ ಮಸೂದೆ. ಆದಷ್ಟು ಬೇಗ ಅದನ್ನು ಕಾನೂನು ಆಗಿ ತರೋಣ ಎಂದು ಮನಮೋಹನ್ ಸಿಂಗ್ ಅವರಿಗೆ ಮನಮುಟ್ಟುವಂತೆ ಹೇಳಿದರು. ಸಿಂಗ್ ಅವರೂ ಆಗ ಮನಃಪೂರ್ವಕವಾಗಿ ಒಪ್ಪಿದ್ದರು.
ರಾಜಕೀಯ ಎನ್ನುವುದೇ ಹೀಗೆ. ಪ್ರಧಾನಿಯಾಗಬೇಕೆಂದು ಜೀವನವಿಡೀ ಕನಸುಗಳನ್ನು ಕಂಡವರು, ಅದಕ್ಕಾಗಿ ಹಲವಾರು ನೈಪುಣ್ಯಗಳನ್ನು ಕಳೆಗೂಡಿಸಿದವರು, ಅಂತಹ ಮಹಾತ್ವಾಕಾಂಕ್ಷೆಯಿಂದಲೇ ರಂಗಕ್ಕೆ ಇಳಿದವರು ಪ್ರಧಾನಿಯಾಗದೇ ಉಳಿಯುತ್ತಾರೆ. ಇನ್ಯಾರೋ ಆಗಿದ್ದಾರೆ. ಮನಮೋಹನ್ ಸಿಂಗ್ ಅವರ ಸುತ್ತಿರುವ ಮಂತ್ರಿಮಂಡಲದ ಬಹಳಷ್ಟು ಮಂದಿಗೆ ಲೋಕಪಾಲ್ ಮಸೂದೆ ಅಷ್ಟೊಂದು ಅಗತ್ಯವೂ ಆಗಿರಲಿಲ್ಲ, ಮುಖ್ಯವೂ ಆಗಿರಲಿಲ್ಲ. ರಾಜಕೀಯವನ್ನು ತಮ್ಮ ಎಳವೆಯಿಂದಲೇ ಬದುಕನ್ನಾಗಿ ಮಾಡಿದವರಿಗೆ ಇದೆಲ್ಲಾ ಬೇಕಾಗಿರಲಿಲ್ಲ. ಇಂದು ಅಧಿಕಾರದಲ್ಲಿ ನಾವಿದ್ದೇವೆ, ನಮ್ಮಲ್ಲಿ ಕೆಲವರು ಈಗಾಗಲೇ ಬಹಳಷ್ಟು ಬಾಚಿಕೊಂಡಿದ್ದಾರೆ. ನಾವೂ ಬಾಚಿಕೊಳ್ಳುತ್ತಿದ್ದೇವೆ. ಅದಕ್ಕೆ ಈಗ ಕಡಿವಾಣ ಯಾಕೆ. ಈಗಿರುವ ವ್ಯವಸ್ಥೆಯಲ್ಲಿಯೇ ನಮಗೆ ಬಾಚಿಕೊಳ್ಳಲು ಅವಕಾಶವೂ ಇದೆ. ಜೈಲಿಗೆ ಕಳುಹಿಸಲು ಮಾರ್ಗವೂ ಇದೆ. ಇದು ಅವರ ನಂಬಿಕೆಯಾಗಿತ್ತು.
ಅದ್ಭುತ ಧೈರ್ಯ, ಸ್ವತಂತ್ರ ಮನಸ್ಸು ಹಾಗೂ ತತ್ವಕ್ಕಾಗಿ ಜೀವ ಬೇಕಾದರೂ ನೀಡಲು ಸಿದ್ಧವಾಗಿರುವಂತಹ ನಿಲುವುಗಳನ್ನು ಹೊಂದಿರುವ ಕಿಶನ್ ಬಾಬೂರಾವ್ ಯಾನೆ ಅಣ್ಣಾ ಹಜಾರೆ ಈ ಬಾರಿ ಇದು ತನ್ನ ಕೊನೆಯ ಅವಕಾಶ ಎಂದು ಮನಗಂಡರು. ಪ್ರಧಾನಿಗೆ ಸಮಯದ ಗಡುವನ್ನು ಕೊಟ್ಟು ಹೇಳಿದರು. ನಿಮ್ಮ ಮುಖದಲ್ಲಿ, ಅಂತೆಯೇ ಜನರ ಮುಖದಲ್ಲಿಯೂ ನಾನು ನಗುವನ್ನು ಕಾಣಲು ಹಾತೊರೆಯುತ್ತಿದ್ದೇನೆ. ಸಮಯದೊಳಗೆ ನಿರ್ಧಾರಕ್ಕೆ ಬನ್ನಿ. ಜತೆಯಾಗಿ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಅನ್ನು ನಿರ್ನಾಮ ಮಾಡೋಣ ಎಂದರು. ಡಾ. ಮನಮೋಹನ್ ಸಿಂಗ್ ಅವರ ಸರಕಾರ ಕೊಟ್ಟ ಮಾತು ನೆರವೇರಿಸುವಂತೆ ಕಾಣಲಿಲ್ಲ.
ಎಪ್ರಿಲ್ ತಿಂಗಳಲ್ಲಿ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಐದು ದಿನ ಉಪವಾಸ ಕೂತರು. ಸರಕಾರದ ನಿರ್ಲಿಪ್ತತೆಯಿಂದಾಗಿ ಅಣ್ಣಾ ಹಜಾರೆ ಅವರು ಆಗಸ್ಟ್ 16 ರಂದು ಮತ್ತೆ ಉಪವಾಸ ಆರಂಭಿಸುವ ಮಾತಾಡಿದರು. ಬೆಚ್ಚಿ ಬಿದ್ದ ಸರಕಾರದ ಚಿಲ್ಲರೆ ರಾಜಕೀಯ ವ್ಯಕ್ತಿಗಳು ನಿಜಕ್ಕೂ ಗಾಬರಿಗೊಂಡರು. ಅಣ್ಣ ಹಜಾರೆ ತಿಹಾರ್ ಜೈಲಿಗೆ ಹೋದರೂ ತಮ್ಮ ಬೆದರದ ನಿಲುವಿನಿಂದಾಗಿ ಸರಕಾರವನ್ನು ಮಣಿಸುವಲ್ಲಿ 13 ದಿನಗಳ ಉಪವಾಸ ಕುಳಿತರು. ದೆಹಲಿಯ ರಾಮಲೀಲಾ ಮೈದಾನ ಮಾಧ್ಯಮಗಳಿಗೆ ’ಪೀಪ್ಲಿ ಲೈವ್’ ಆಯಿತು. ಒಂದೊಮ್ಮೆ ಅಣ್ಣಾ ಹಜಾರೆ ತೆಗೆದುಕೊಂಡ ನಿಲುವುಗಳು ಪ್ರಜಾಸತ್ತಾತ್ಮಕ ಧ್ಯೇಯಗಳನ್ನು ಪ್ರಶ್ನಿಸುವಂತೆ ಇದ್ದವು. ಭಾರತದ ಅಭಿವೃದ್ಧಿಯ ಆಧಾರಸ್ಥಂಭವಾದ ಪ್ರಜಾತಾಂತ್ರಿಕತೆಗೆ ಏಟು ಬೀಳುವ ಭಯವೂ ಉಂಟಾಯಿತು. ನಾವೇ ಆರಿಸಿ ಕಳುಹಿಸಿದ ನಮ್ಮ ಪ್ರತಿನಿಧಿಗಳನ್ನು ಓರ್ವ ನಿವೃತ್ತ ಸೇನಾ ಟ್ರಕ್ ಚಾಲಕನು ನಿಯಂತ್ರಿಸುವುದೆಂದರೆ ನಾವು ಕೊಟ್ಟ ಮತಗಳಿಗೆ ಬೆಲೆಯಿಲ್ಲದಂತಾಯಿತೇ ಎಂಬುದು ನಿಜವಾದ ಪ್ರಜೆಯ ಆತಂಕವಾಗಿರುವುದು ಸೋಜಿಗವೇನಲ್ಲ. ಅಣ್ಣಾ ಹಜಾರೆಯವರಿಗೆ ಈ ದಿನಗಳು ಹೊಸ ಹುಟ್ಟಿಗಾಗಿ ಕಾಡುವ ನೋವಾಗಿತ್ತು. ಕಣಿವೆಯಾಚೆಗಿನ ಬೆಳಕಿನಲ್ಲಿ ಅವರು ವಿಶ್ವಾಸ ವಿಟ್ಟಿದ್ದರು. ಹತ್ತುದಿನಗಳ ನಂತರವಾದರೂ ಸರಕಾರ ವಿರೋಧ ಪಕ್ಷಗಳ ಜತೆಗೆ ಕುಳಿತು ಅಣ್ಣ ಹಜಾರೆ ಮುಂದೆ ತನ್ನ ಅಸಹಾಯಕ ಕೈಯನ್ನು ಒಡ್ಡಿತು. ಐತಿಹಾಸಿಕ ಚರ್ಚೆ ಸಂಸತ್ತಿನ ಎರಡೂ ಸದನಗಳಲ್ಲೂ ನಡೆಯಿತು. ಮದ್ದಿಲ್ಲದ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಗೆ ಅಣ್ಣಾ ಹಜಾರೆ ಕೊಟ್ಟ ಇಂಜೆಕ್ಷನ್ ಸರಕಾರವನ್ನು ನೋವಿಗೀಡುಮಾಡಿತು. ಅವರ ಉಪವಾಸ ದೇಶದೆಲ್ಲೆಡೆ ಜನರನ್ನು ಪ್ರಚೋದಿಸಿದ ರೀತಿ ಇತ್ತೀಚಿನ ವರ್ಷಗಳಲ್ಲಿ ದೇಶದ ಇಂದಿನ ಇತಿಹಾಸಕಾರರು ಕಂಡಿರಲಿಲ್ಲ. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟ ತನಗೆ ಪ್ರೇರಕ ಎಂದ ಅಣ್ಣಾ ಹಜಾರೆಯವರಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಹಿಡಿದು ಪಂಜಾಬಿನ ಲುಧಿಯಾನದ ವರೆಗೂ ಬೆಂಬಲ ದೊರೆಯಿತು. ಭ್ರಷ್ಟಾಚಾರದಿಂದ ದೇಶದ ಜನತೆ ರೋಸಿಹೋಗಿದ್ದರು. ಜನನಾಯಕರೆನಿಸಿಕೊಂಡಿರುವ ರಾಜಕಾರಣಿಗಳಿಂದ ಭ್ರಮನಿರಶನ ಗೊಂಡಿದ್ದರು. ಜನಸಾಮಾನ್ಯರಲ್ಲಿ ಸುಪ್ತವಾಗಿದ್ದ ಸಿಟ್ಟನ್ನು ಹೊರಗೆಡಹಲು ಹಜಾರೆಯವರ ಹೋರಾಟ ಒಂದು ಮಾಧ್ಯಮವಾಯಿತು. ಜನ ಬೀದಿಗಿಳಿದರು.
ತ್ರಿವರ್ಣ ದ್ವಜವನ್ನು ಹಾರಿಸಿದರು. ಭಾರತ ಮಾತೆಗೆ ಜಯಕಾರ ಹಾಕಿದರು. ದೇಶ ಪ್ರೇಮವನ್ನು ಮೆರೆದರು. ಜನರ ಆಕ್ರೋಶ ಶಾಂತರೂಪದ ಪ್ರತಿಭಟನೆಯಾಗಿ ಪರಿಣಮಿಸಿತು. ಒಂದು ಪ್ರಜಾಸತ್ತಾತ್ಮಕ ಚಳವಳಿ ಎಂದರೆ ಅದು ಅಧಿಕಾರ ನಡೆಸುವವರನ್ನು ಜನ ಸಮಷ್ಟಿಯಾಗಿ ಪ್ರಶ್ನಿಸುವ, ಅವರಿಂದ ಏನನ್ನೋ ಆಗ್ರಹಿಸುವ ಪ್ರಕ್ರಿಯೆ. ಒಂದು ಆರೋಗ್ಯಕರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೀಗೆ ಆಗ್ರಹಿಸುವ ಮತ್ತು ಸವಾಲೆಸೆಯುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರಬೇಕು.ಇದು ಜನತೆಯ ಒಗ್ಗಟ್ಟಿಗೆ ಸಂದ ಐತಿಹಾಸಿಕ ಜಯ, ನಾಗರಿಕ ಹೋರಾಟಗಾರರ ಶ್ರಮಕ್ಕೆ ಸಿಕ್ಕ ಪ್ರತಿಫಲ, ಇಂದು ಅಣ್ಣಾ ಹಜಾರೆ ಕೇವಲ ವ್ಯಕ್ತಿಯಾಗಿ ಉಳಿದಿಲ್ಲ. ನೋಡನೋಡುತ್ತಿದ್ದಂತೆ ಒಂದು ಪ್ರತೀಕವಾಗಿಬಿಟ್ಟಿದ್ದಾರೆ ಎಂದು ಮಾಧ್ಯಮಗಳು ಹೇಳತೊಡಗಿದವು. ಅಣ್ಣಾ ಹಜಾರೆ ಅವರಿಗೆ ಹೋರಾಟ ಇದೇನು ಮೊದಲ ಸಲವಲ್ಲ. ಮಾಹಿತಿ ಹಕ್ಕು ಕಾಯ್ದೆ ಅವರ ಹೋರಾಟದ ಪ್ರತಿಫಲ. ರಾಳೇಗಣ ಸಿದ್ದಿಯ ಅಭಿವೃದ್ಧಿಗಾಗಿ ಸರಕಾರದ ಜತೆ ಮಾಡಿದ ಹೋರಾಟ ಅವರಿಗೆ ಬಹಳಷ್ಟು ಸಫಲತೆಯನ್ನು ಕೊಟ್ಟಿದೆ. ಇಂದು ಆ ಗ್ರಾಮ ಒಂದು ಮಾದರಿ ಗ್ರಾಮವಾಗಿದೆ. ಅಣ್ಣಾ ಹಜಾರೆ ಅವರು ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ತನ್ನ ಹುಟ್ಟೂರಿನತ್ತ ಪಾದ ಬೆಳೆಸಿದ ಅವರು ಭ್ರಷ್ಟಾಚಾರಿ ವಿರೋಧಿ ಜನ ಆಂದೋಲನವನ್ನು 1991ರಲ್ಲಿ ಆರಂಭಿಸಿದರು. ಉಪವಾಸ ನಿಲ್ಲಿಸುವ ಮುನ್ನ ಅಣ್ಣಾ ಹಜಾರೆ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದಿದ್ದಾರೆ. ಭ್ರಷ್ಟಾಚಾರ ಹೋಗಲಾಡಿಸಲು ಪದೇಪದೇ ಇಂತಹ ಆಘಾತ ನೀಡಬೇಕು. ಅಧಿಕಾರದ ವಿಕೇಂದ್ರೀಕರಣ, ಕೃಷಿಕರು ಮತ್ತು ಕಾರ್ಮಿಕರನ್ನು ರಕ್ಷಿಸಲು ಶಾಸನ, ಸಾಮಾಜಿಕ ಸಬಲೀಕರಣ, ಶಿಕ್ಷಣದ ವಾಣಿಜ್ಯೀಕರಣಕ್ಕೆ ನಿಯಂತ್ರಣ ಮುಂತಾದ ವಿಷಯಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕಿದೆ ಎಂದು ಅಣ್ಣಾ ಹಜಾರೆ ಹೇಳುತ್ತಿದ್ದಾರೆ. ಕ್ಯಾನ್ಸರ್ ರೂಪದಲ್ಲಿ ಇಡೀ ಸಮಾಜಕ್ಕೆ ಅಂಟಿರುವ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವುದು ಒಂದು ಕಾನೂನಿನಿಂದ ಆಗುವ ಕೆಲಸವಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಬೃಹತ್ತಾದ ಒಂದು ಚಳವಳಿಯಿಂದಲೂ ಅದನ್ನು ಕಿತ್ತೆಸೆಯಲಾಗದು. ರಾಳೇಗಣ ಸಿದ್ದಿಯ ಮುದುಕ ಅಣ್ಣಾ ಹಜಾರೆ ಅವರ ಕೆಲವೊಂದು ನಿರ್ಣಯಗಳು ಅವರನ್ನು ಜನವಿರೋಧಿಯನ್ನಾಗಿ ಮಾಡುತ್ತವೆ.
ಅವರ ಸಹವರ್ತಿಗಳ ಅನುಮಾನಾಸ್ಪದ ವರ್ತನೆಗಳು, ಹೋರಾಟದ ಹಿಂದೆ ಮುಗ್ದ ಜನರನ್ನು ಮೋಸಗೊಳಿಸಬಲ್ಲ ನಗರದ ಮುಖವಾಡಗಳು ಹಜಾರೆಯವರ ಬಿಳಿಟೋಪಿಯ ಮೇಲೆ ಮಸುಕಾಗಿ ಮೂಡುವ ಕಪ್ಪುಗೆರೆಗಳಾಗಿವೆ. ರಾಳೇಗಣ ಸಿದ್ಧಿಯಲ್ಲಿ ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡಿದರೂ ಅಣ್ಣಾ ಹಜಾರೆ ಅನುಸರಿಸಿದ ಮಾರ್ಗದಲ್ಲಿ ಕೆಲವೊಮ್ಮೆ ಹೊಂಡಗಳು ಎದ್ದು ಕಾಣುತ್ತವೆ. ಕಳೆದ ಎರಡು ದಶಕಗಳಲ್ಲಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗಳನ್ನೇ ನಡೆಸದೆ, ರಾಷ್ಟ್ರೀಯ ಚುನಾವಣೆಗಳ ಸಂದರ್ಭಗಳಲ್ಲಿ ಪ್ರಚಾರಕ್ಕೇ ಅವಕಾಶ ನೀಡದೇ ಆಧುನಿಕ ಪ್ರಜಾಪ್ರಭುತ್ವದ ಆದರ್ಶಗಳನ್ನು ಗಾಳಿಗೆ ತೂರಿರುವುದು ಅವರ ನಡತೆಯಲ್ಲಿ ಹುಳುಕು ಹುಡುಕುವ ಕೆಲಸವಲ್ಲ. ನಿಜ ಸತ್ಯ. ಅಣ್ಣಾ ಹಜಾರೆ ಸಮಾಜದ ಹೊಸ ವರ್ಗಕ್ಕೆ ಆಶಾದೀಪವಾಗಿರುವುದು ನಿಜ. ಅಣ್ಣಾ ಬೆಂಬಲಿಗರು ಪ್ರಜಾತಂತ್ರವನ್ನು ಅರ್ಥೈಸಿ ಅದರ ತಳಹದಿಯ ಮೇಲೆ ನಿಂತು ಕೊಳೆತಿರುವ ವ್ಯವಸ್ಥೆಯನ್ನು ಪಕ್ಷಾತೀತರಾಗಿ ಪ್ರಶ್ನಿಸಬೇಕು. ಅಣ್ಣಾ ಹಜಾರೆಯವರ ಬೆಳಕು ಮುಂಜಾನೆಯ ಮಂದಕಿರಣವಾಗಿ ಸಮಾಜದಲ್ಲಿ ಹೊಸ ಚೈತನ್ಯವನ್ನು ತರಬೇಕು.
![]() |
| ಅಣ್ಣಾ ಹಜಾರೆ ಮತ್ತು ಸರಕಾರ (ಚಿತ್ರ: ಪ್ರಕಾಶ್ ಶೆಟ್ಟಿ ಉಳೆಪಾಡಿ) |
ವಿಶ್ವಮಟ್ಟದ ಪ್ರಖ್ಯಾತ ಅರ್ಥಶಾಸ್ತ್ರ ತಜ್ಞರಾದ ಡಾ. ಮನಮೋಹನ್ ಸಿಂಗ್ ಅವರ ಮನಸ್ಸೂ ವಿಚಲಿತವಾದಂತೆ ಇತ್ತು. ಪ್ರಧಾನಿಯ ಕುರ್ಚಿಯ ನಾಲ್ಕು ಕಾಲುಗಳು ಗಟ್ಟಿಮುಟ್ಟಾಗಿದ್ದರೂ ಅದರಲ್ಲಿ ಕುಳಿತುಕೊಳ್ಳುವ ಮೆತ್ತೆಯ ಹಾಸಿನಲ್ಲಿ ಮುಳ್ಳುಗಳು ಅವರನ್ನು ಚುಚ್ಚುತ್ತಿದ್ದಾವೆ. ಚುಚ್ಚುವ ಕುರ್ಚಿಯಿಂದ ಎದ್ದು ನಿಂತು ತನ್ನ ಪಾಡನ್ನು ಹೇಳಲು ಅವರಿಗೆ ಅವರ ಮನೋಸ್ಥಿತಿಯ ಸ್ನೇಹಿತರಾಗಲೀ, ಸಲಹಾಗಾರರಾಗಲೀ ಸದ್ಯ ಸರಕಾರದಲ್ಲಿ ಅಥವಾ ಪಕ್ಷದಲ್ಲಿ ಯಾರೂ ಇಲ್ಲ. ಎಲ್ಲವನ್ನು ಮೂಕವಾಗಿ ಅನುಭವಿಸುತ್ತಿರುವ ಮನಮೋಹನ ಸಿಂಗ್ ಅವರನ್ನು ಜನ ’ಮೂಕ ಪ್ರಧಾನಿ’ ಎಂದು ಮೂದಲಿಸುತ್ತಿದ್ದಾರೆ.
ಇಂತಹ ಪ್ರಧಾನಿಯವರ ಮೂಕ ವೇದನೆಯನ್ನು ಅರಿತು ಅದರ ಹಲವು ಕಾರಣಗಳಲ್ಲಿ ಒಂದಾದ ಭ್ರಷ್ಟಾಚಾರದ ಕುರಿತು ಸಮಾಲೋಚಿಸಿ ಸಲಹೆ ನೀಡಲು ದೂರದ ಮಹಾರಾಷ್ಟ್ರದ ರಾಳೇಗಣ ಸಿದ್ದಿಯ ಮುದುಕ ಕಿಶನ್ ಬಾಪಟ್ ಬಾಬೂರಾವ್ ಕಳೆದ ವರ್ಷ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಪ್ರಧಾನಿ ನಿವಾಸದಲ್ಲಿ ಹಲವು ಗಂಟೆಗಳಷ್ಟು ಕಾಲ ಕುಳಿತು ಚರ್ಚಿಸಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರ ಗಂಟಿಕ್ಕಿದ ಮುಖದಲ್ಲಿ ನಗು ಹುಟ್ಟಿಸುವಂತಹ ಕೆಲಸ ಮಾಡಲು ಅವರು ತಯಾರಿದ್ದರು. ಕುರ್ಚಿಯ ಮೆತ್ತೆಯ ಮೇಲಿನ ಮುಳ್ಳುಗಳನ್ನು ಕಿತ್ತೆಸೆಯಲು ಉಪಾಯಗಳನ್ನು ಹುಟ್ಟುಹಾಕಿದ್ದರು. ಅವುಗಳಲ್ಲಿ ಒಂದು, ಕಳೆದ ನಾಲ್ಕು ದಶಕಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಲೋಕಪಾಲ್ ಮಸೂದೆ. ಆದಷ್ಟು ಬೇಗ ಅದನ್ನು ಕಾನೂನು ಆಗಿ ತರೋಣ ಎಂದು ಮನಮೋಹನ್ ಸಿಂಗ್ ಅವರಿಗೆ ಮನಮುಟ್ಟುವಂತೆ ಹೇಳಿದರು. ಸಿಂಗ್ ಅವರೂ ಆಗ ಮನಃಪೂರ್ವಕವಾಗಿ ಒಪ್ಪಿದ್ದರು.
ರಾಜಕೀಯ ಎನ್ನುವುದೇ ಹೀಗೆ. ಪ್ರಧಾನಿಯಾಗಬೇಕೆಂದು ಜೀವನವಿಡೀ ಕನಸುಗಳನ್ನು ಕಂಡವರು, ಅದಕ್ಕಾಗಿ ಹಲವಾರು ನೈಪುಣ್ಯಗಳನ್ನು ಕಳೆಗೂಡಿಸಿದವರು, ಅಂತಹ ಮಹಾತ್ವಾಕಾಂಕ್ಷೆಯಿಂದಲೇ ರಂಗಕ್ಕೆ ಇಳಿದವರು ಪ್ರಧಾನಿಯಾಗದೇ ಉಳಿಯುತ್ತಾರೆ. ಇನ್ಯಾರೋ ಆಗಿದ್ದಾರೆ. ಮನಮೋಹನ್ ಸಿಂಗ್ ಅವರ ಸುತ್ತಿರುವ ಮಂತ್ರಿಮಂಡಲದ ಬಹಳಷ್ಟು ಮಂದಿಗೆ ಲೋಕಪಾಲ್ ಮಸೂದೆ ಅಷ್ಟೊಂದು ಅಗತ್ಯವೂ ಆಗಿರಲಿಲ್ಲ, ಮುಖ್ಯವೂ ಆಗಿರಲಿಲ್ಲ. ರಾಜಕೀಯವನ್ನು ತಮ್ಮ ಎಳವೆಯಿಂದಲೇ ಬದುಕನ್ನಾಗಿ ಮಾಡಿದವರಿಗೆ ಇದೆಲ್ಲಾ ಬೇಕಾಗಿರಲಿಲ್ಲ. ಇಂದು ಅಧಿಕಾರದಲ್ಲಿ ನಾವಿದ್ದೇವೆ, ನಮ್ಮಲ್ಲಿ ಕೆಲವರು ಈಗಾಗಲೇ ಬಹಳಷ್ಟು ಬಾಚಿಕೊಂಡಿದ್ದಾರೆ. ನಾವೂ ಬಾಚಿಕೊಳ್ಳುತ್ತಿದ್ದೇವೆ. ಅದಕ್ಕೆ ಈಗ ಕಡಿವಾಣ ಯಾಕೆ. ಈಗಿರುವ ವ್ಯವಸ್ಥೆಯಲ್ಲಿಯೇ ನಮಗೆ ಬಾಚಿಕೊಳ್ಳಲು ಅವಕಾಶವೂ ಇದೆ. ಜೈಲಿಗೆ ಕಳುಹಿಸಲು ಮಾರ್ಗವೂ ಇದೆ. ಇದು ಅವರ ನಂಬಿಕೆಯಾಗಿತ್ತು.
ಅದ್ಭುತ ಧೈರ್ಯ, ಸ್ವತಂತ್ರ ಮನಸ್ಸು ಹಾಗೂ ತತ್ವಕ್ಕಾಗಿ ಜೀವ ಬೇಕಾದರೂ ನೀಡಲು ಸಿದ್ಧವಾಗಿರುವಂತಹ ನಿಲುವುಗಳನ್ನು ಹೊಂದಿರುವ ಕಿಶನ್ ಬಾಬೂರಾವ್ ಯಾನೆ ಅಣ್ಣಾ ಹಜಾರೆ ಈ ಬಾರಿ ಇದು ತನ್ನ ಕೊನೆಯ ಅವಕಾಶ ಎಂದು ಮನಗಂಡರು. ಪ್ರಧಾನಿಗೆ ಸಮಯದ ಗಡುವನ್ನು ಕೊಟ್ಟು ಹೇಳಿದರು. ನಿಮ್ಮ ಮುಖದಲ್ಲಿ, ಅಂತೆಯೇ ಜನರ ಮುಖದಲ್ಲಿಯೂ ನಾನು ನಗುವನ್ನು ಕಾಣಲು ಹಾತೊರೆಯುತ್ತಿದ್ದೇನೆ. ಸಮಯದೊಳಗೆ ನಿರ್ಧಾರಕ್ಕೆ ಬನ್ನಿ. ಜತೆಯಾಗಿ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಅನ್ನು ನಿರ್ನಾಮ ಮಾಡೋಣ ಎಂದರು. ಡಾ. ಮನಮೋಹನ್ ಸಿಂಗ್ ಅವರ ಸರಕಾರ ಕೊಟ್ಟ ಮಾತು ನೆರವೇರಿಸುವಂತೆ ಕಾಣಲಿಲ್ಲ.
ಎಪ್ರಿಲ್ ತಿಂಗಳಲ್ಲಿ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ನಲ್ಲಿ ಐದು ದಿನ ಉಪವಾಸ ಕೂತರು. ಸರಕಾರದ ನಿರ್ಲಿಪ್ತತೆಯಿಂದಾಗಿ ಅಣ್ಣಾ ಹಜಾರೆ ಅವರು ಆಗಸ್ಟ್ 16 ರಂದು ಮತ್ತೆ ಉಪವಾಸ ಆರಂಭಿಸುವ ಮಾತಾಡಿದರು. ಬೆಚ್ಚಿ ಬಿದ್ದ ಸರಕಾರದ ಚಿಲ್ಲರೆ ರಾಜಕೀಯ ವ್ಯಕ್ತಿಗಳು ನಿಜಕ್ಕೂ ಗಾಬರಿಗೊಂಡರು. ಅಣ್ಣ ಹಜಾರೆ ತಿಹಾರ್ ಜೈಲಿಗೆ ಹೋದರೂ ತಮ್ಮ ಬೆದರದ ನಿಲುವಿನಿಂದಾಗಿ ಸರಕಾರವನ್ನು ಮಣಿಸುವಲ್ಲಿ 13 ದಿನಗಳ ಉಪವಾಸ ಕುಳಿತರು. ದೆಹಲಿಯ ರಾಮಲೀಲಾ ಮೈದಾನ ಮಾಧ್ಯಮಗಳಿಗೆ ’ಪೀಪ್ಲಿ ಲೈವ್’ ಆಯಿತು. ಒಂದೊಮ್ಮೆ ಅಣ್ಣಾ ಹಜಾರೆ ತೆಗೆದುಕೊಂಡ ನಿಲುವುಗಳು ಪ್ರಜಾಸತ್ತಾತ್ಮಕ ಧ್ಯೇಯಗಳನ್ನು ಪ್ರಶ್ನಿಸುವಂತೆ ಇದ್ದವು. ಭಾರತದ ಅಭಿವೃದ್ಧಿಯ ಆಧಾರಸ್ಥಂಭವಾದ ಪ್ರಜಾತಾಂತ್ರಿಕತೆಗೆ ಏಟು ಬೀಳುವ ಭಯವೂ ಉಂಟಾಯಿತು. ನಾವೇ ಆರಿಸಿ ಕಳುಹಿಸಿದ ನಮ್ಮ ಪ್ರತಿನಿಧಿಗಳನ್ನು ಓರ್ವ ನಿವೃತ್ತ ಸೇನಾ ಟ್ರಕ್ ಚಾಲಕನು ನಿಯಂತ್ರಿಸುವುದೆಂದರೆ ನಾವು ಕೊಟ್ಟ ಮತಗಳಿಗೆ ಬೆಲೆಯಿಲ್ಲದಂತಾಯಿತೇ ಎಂಬುದು ನಿಜವಾದ ಪ್ರಜೆಯ ಆತಂಕವಾಗಿರುವುದು ಸೋಜಿಗವೇನಲ್ಲ. ಅಣ್ಣಾ ಹಜಾರೆಯವರಿಗೆ ಈ ದಿನಗಳು ಹೊಸ ಹುಟ್ಟಿಗಾಗಿ ಕಾಡುವ ನೋವಾಗಿತ್ತು. ಕಣಿವೆಯಾಚೆಗಿನ ಬೆಳಕಿನಲ್ಲಿ ಅವರು ವಿಶ್ವಾಸ ವಿಟ್ಟಿದ್ದರು. ಹತ್ತುದಿನಗಳ ನಂತರವಾದರೂ ಸರಕಾರ ವಿರೋಧ ಪಕ್ಷಗಳ ಜತೆಗೆ ಕುಳಿತು ಅಣ್ಣ ಹಜಾರೆ ಮುಂದೆ ತನ್ನ ಅಸಹಾಯಕ ಕೈಯನ್ನು ಒಡ್ಡಿತು. ಐತಿಹಾಸಿಕ ಚರ್ಚೆ ಸಂಸತ್ತಿನ ಎರಡೂ ಸದನಗಳಲ್ಲೂ ನಡೆಯಿತು. ಮದ್ದಿಲ್ಲದ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಗೆ ಅಣ್ಣಾ ಹಜಾರೆ ಕೊಟ್ಟ ಇಂಜೆಕ್ಷನ್ ಸರಕಾರವನ್ನು ನೋವಿಗೀಡುಮಾಡಿತು. ಅವರ ಉಪವಾಸ ದೇಶದೆಲ್ಲೆಡೆ ಜನರನ್ನು ಪ್ರಚೋದಿಸಿದ ರೀತಿ ಇತ್ತೀಚಿನ ವರ್ಷಗಳಲ್ಲಿ ದೇಶದ ಇಂದಿನ ಇತಿಹಾಸಕಾರರು ಕಂಡಿರಲಿಲ್ಲ. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟ ತನಗೆ ಪ್ರೇರಕ ಎಂದ ಅಣ್ಣಾ ಹಜಾರೆಯವರಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಹಿಡಿದು ಪಂಜಾಬಿನ ಲುಧಿಯಾನದ ವರೆಗೂ ಬೆಂಬಲ ದೊರೆಯಿತು. ಭ್ರಷ್ಟಾಚಾರದಿಂದ ದೇಶದ ಜನತೆ ರೋಸಿಹೋಗಿದ್ದರು. ಜನನಾಯಕರೆನಿಸಿಕೊಂಡಿರುವ ರಾಜಕಾರಣಿಗಳಿಂದ ಭ್ರಮನಿರಶನ ಗೊಂಡಿದ್ದರು. ಜನಸಾಮಾನ್ಯರಲ್ಲಿ ಸುಪ್ತವಾಗಿದ್ದ ಸಿಟ್ಟನ್ನು ಹೊರಗೆಡಹಲು ಹಜಾರೆಯವರ ಹೋರಾಟ ಒಂದು ಮಾಧ್ಯಮವಾಯಿತು. ಜನ ಬೀದಿಗಿಳಿದರು.
ತ್ರಿವರ್ಣ ದ್ವಜವನ್ನು ಹಾರಿಸಿದರು. ಭಾರತ ಮಾತೆಗೆ ಜಯಕಾರ ಹಾಕಿದರು. ದೇಶ ಪ್ರೇಮವನ್ನು ಮೆರೆದರು. ಜನರ ಆಕ್ರೋಶ ಶಾಂತರೂಪದ ಪ್ರತಿಭಟನೆಯಾಗಿ ಪರಿಣಮಿಸಿತು. ಒಂದು ಪ್ರಜಾಸತ್ತಾತ್ಮಕ ಚಳವಳಿ ಎಂದರೆ ಅದು ಅಧಿಕಾರ ನಡೆಸುವವರನ್ನು ಜನ ಸಮಷ್ಟಿಯಾಗಿ ಪ್ರಶ್ನಿಸುವ, ಅವರಿಂದ ಏನನ್ನೋ ಆಗ್ರಹಿಸುವ ಪ್ರಕ್ರಿಯೆ. ಒಂದು ಆರೋಗ್ಯಕರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೀಗೆ ಆಗ್ರಹಿಸುವ ಮತ್ತು ಸವಾಲೆಸೆಯುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರಬೇಕು.ಇದು ಜನತೆಯ ಒಗ್ಗಟ್ಟಿಗೆ ಸಂದ ಐತಿಹಾಸಿಕ ಜಯ, ನಾಗರಿಕ ಹೋರಾಟಗಾರರ ಶ್ರಮಕ್ಕೆ ಸಿಕ್ಕ ಪ್ರತಿಫಲ, ಇಂದು ಅಣ್ಣಾ ಹಜಾರೆ ಕೇವಲ ವ್ಯಕ್ತಿಯಾಗಿ ಉಳಿದಿಲ್ಲ. ನೋಡನೋಡುತ್ತಿದ್ದಂತೆ ಒಂದು ಪ್ರತೀಕವಾಗಿಬಿಟ್ಟಿದ್ದಾರೆ ಎಂದು ಮಾಧ್ಯಮಗಳು ಹೇಳತೊಡಗಿದವು. ಅಣ್ಣಾ ಹಜಾರೆ ಅವರಿಗೆ ಹೋರಾಟ ಇದೇನು ಮೊದಲ ಸಲವಲ್ಲ. ಮಾಹಿತಿ ಹಕ್ಕು ಕಾಯ್ದೆ ಅವರ ಹೋರಾಟದ ಪ್ರತಿಫಲ. ರಾಳೇಗಣ ಸಿದ್ದಿಯ ಅಭಿವೃದ್ಧಿಗಾಗಿ ಸರಕಾರದ ಜತೆ ಮಾಡಿದ ಹೋರಾಟ ಅವರಿಗೆ ಬಹಳಷ್ಟು ಸಫಲತೆಯನ್ನು ಕೊಟ್ಟಿದೆ. ಇಂದು ಆ ಗ್ರಾಮ ಒಂದು ಮಾದರಿ ಗ್ರಾಮವಾಗಿದೆ. ಅಣ್ಣಾ ಹಜಾರೆ ಅವರು ಭಾರತೀಯ ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ತನ್ನ ಹುಟ್ಟೂರಿನತ್ತ ಪಾದ ಬೆಳೆಸಿದ ಅವರು ಭ್ರಷ್ಟಾಚಾರಿ ವಿರೋಧಿ ಜನ ಆಂದೋಲನವನ್ನು 1991ರಲ್ಲಿ ಆರಂಭಿಸಿದರು. ಉಪವಾಸ ನಿಲ್ಲಿಸುವ ಮುನ್ನ ಅಣ್ಣಾ ಹಜಾರೆ ಈ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದಿದ್ದಾರೆ. ಭ್ರಷ್ಟಾಚಾರ ಹೋಗಲಾಡಿಸಲು ಪದೇಪದೇ ಇಂತಹ ಆಘಾತ ನೀಡಬೇಕು. ಅಧಿಕಾರದ ವಿಕೇಂದ್ರೀಕರಣ, ಕೃಷಿಕರು ಮತ್ತು ಕಾರ್ಮಿಕರನ್ನು ರಕ್ಷಿಸಲು ಶಾಸನ, ಸಾಮಾಜಿಕ ಸಬಲೀಕರಣ, ಶಿಕ್ಷಣದ ವಾಣಿಜ್ಯೀಕರಣಕ್ಕೆ ನಿಯಂತ್ರಣ ಮುಂತಾದ ವಿಷಯಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕಿದೆ ಎಂದು ಅಣ್ಣಾ ಹಜಾರೆ ಹೇಳುತ್ತಿದ್ದಾರೆ. ಕ್ಯಾನ್ಸರ್ ರೂಪದಲ್ಲಿ ಇಡೀ ಸಮಾಜಕ್ಕೆ ಅಂಟಿರುವ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವುದು ಒಂದು ಕಾನೂನಿನಿಂದ ಆಗುವ ಕೆಲಸವಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಬೃಹತ್ತಾದ ಒಂದು ಚಳವಳಿಯಿಂದಲೂ ಅದನ್ನು ಕಿತ್ತೆಸೆಯಲಾಗದು. ರಾಳೇಗಣ ಸಿದ್ದಿಯ ಮುದುಕ ಅಣ್ಣಾ ಹಜಾರೆ ಅವರ ಕೆಲವೊಂದು ನಿರ್ಣಯಗಳು ಅವರನ್ನು ಜನವಿರೋಧಿಯನ್ನಾಗಿ ಮಾಡುತ್ತವೆ.
ಅವರ ಸಹವರ್ತಿಗಳ ಅನುಮಾನಾಸ್ಪದ ವರ್ತನೆಗಳು, ಹೋರಾಟದ ಹಿಂದೆ ಮುಗ್ದ ಜನರನ್ನು ಮೋಸಗೊಳಿಸಬಲ್ಲ ನಗರದ ಮುಖವಾಡಗಳು ಹಜಾರೆಯವರ ಬಿಳಿಟೋಪಿಯ ಮೇಲೆ ಮಸುಕಾಗಿ ಮೂಡುವ ಕಪ್ಪುಗೆರೆಗಳಾಗಿವೆ. ರಾಳೇಗಣ ಸಿದ್ಧಿಯಲ್ಲಿ ವ್ಯಾಪಕ ಕ್ಷೇತ್ರಕಾರ್ಯವನ್ನು ಮಾಡಿದರೂ ಅಣ್ಣಾ ಹಜಾರೆ ಅನುಸರಿಸಿದ ಮಾರ್ಗದಲ್ಲಿ ಕೆಲವೊಮ್ಮೆ ಹೊಂಡಗಳು ಎದ್ದು ಕಾಣುತ್ತವೆ. ಕಳೆದ ಎರಡು ದಶಕಗಳಲ್ಲಿ ಗ್ರಾಮದಲ್ಲಿ ಪಂಚಾಯಿತಿ ಚುನಾವಣೆಗಳನ್ನೇ ನಡೆಸದೆ, ರಾಷ್ಟ್ರೀಯ ಚುನಾವಣೆಗಳ ಸಂದರ್ಭಗಳಲ್ಲಿ ಪ್ರಚಾರಕ್ಕೇ ಅವಕಾಶ ನೀಡದೇ ಆಧುನಿಕ ಪ್ರಜಾಪ್ರಭುತ್ವದ ಆದರ್ಶಗಳನ್ನು ಗಾಳಿಗೆ ತೂರಿರುವುದು ಅವರ ನಡತೆಯಲ್ಲಿ ಹುಳುಕು ಹುಡುಕುವ ಕೆಲಸವಲ್ಲ. ನಿಜ ಸತ್ಯ. ಅಣ್ಣಾ ಹಜಾರೆ ಸಮಾಜದ ಹೊಸ ವರ್ಗಕ್ಕೆ ಆಶಾದೀಪವಾಗಿರುವುದು ನಿಜ. ಅಣ್ಣಾ ಬೆಂಬಲಿಗರು ಪ್ರಜಾತಂತ್ರವನ್ನು ಅರ್ಥೈಸಿ ಅದರ ತಳಹದಿಯ ಮೇಲೆ ನಿಂತು ಕೊಳೆತಿರುವ ವ್ಯವಸ್ಥೆಯನ್ನು ಪಕ್ಷಾತೀತರಾಗಿ ಪ್ರಶ್ನಿಸಬೇಕು. ಅಣ್ಣಾ ಹಜಾರೆಯವರ ಬೆಳಕು ಮುಂಜಾನೆಯ ಮಂದಕಿರಣವಾಗಿ ಸಮಾಜದಲ್ಲಿ ಹೊಸ ಚೈತನ್ಯವನ್ನು ತರಬೇಕು.
Labels:
Event
Monday, August 1, 2011
ಅಂಕಣ ಬರೆಯುವುದು ಹೇಗೆ?
ಅಂಕಣ ಎನ್ನುವುದು ಸಂಪಾದಕರು, ಹಿರಿಯ ಪತ್ರಕರ್ತರು ಸಂಪಾದಕೀಯ ಪುಟವನ್ನು ತುಂಬಿಸಲು ಬರೆಯುವ ಬರಹ. ಪರಂಪರೆಯಂತೆ ಸಂಪಾದಕೀಯ ಪುಟದಲ್ಲಿ ಸದ್ಯಕ್ಕೆ ಜಾಹೀರಾತು ಪ್ರಕಟಿಸುತ್ತಿಲ್ಲ. ಇನ್ನು ಸದ್ಯದಲ್ಲಿಯೇ ಯಾರಾದರೂ ಉದ್ಯಮಿಗಳು, ವ್ಯಾಪಾರಿಗಳು ದುಪ್ಪಟ್ಟು ಹಣ ನೀಡುವುದಾದರೆ ಮತ್ತು ಸಂಪಾದಕರು ಮತ್ತು ಪತ್ರಕರ್ತರು ತಮಗೆ ತಮ್ಮ ವೃತ್ತಿಗಿಂತ ಪತ್ರಿಕೆಯನ್ನು ಇತರ ಉದ್ಯಮದಂತೆ ಐಷಾರಾಮದಲ್ಲಿ ನಡೆಸಲು ಬಯಸುವುದಾದರೆ ಸಂಪಾದಕೀಯ ಪುಟದಲ್ಲೂ ಜಾಹೀರಾತು ಪ್ರಕಟಿಸಿ ಅಂಕಣವೆಂಬುದನ್ನು ನಿಲ್ಲಿಸಿಬಿಡಬಹುದು.
ಅಂಕಣ ಬರೆಸುವುದೂ ಕೂಡಾ ಕೆಲವೊಮ್ಮೆ ಪತ್ರಿಕೆಯ ಸಂಪಾದಕರಿಗೆ ಅನಿವಾರ್ಯವಾಗಿ ಬಿಡುತ್ತದೆ. ತಮ್ಮ ಗೆಳೆಯರೋ, ಪರಿಚಯದವರೋ ತಮಗೆ ಯಾವುದಾದರೂ ಸಹಾಯ ಮಾಡಿದ್ದರೆ ಅದಕ್ಕೆ ಪ್ರತಿಯಾಗಿ ಅಂತಹವರಿಂದ ಅಂಕಣ ಬರೆಸಬಹುದು. ನನ್ನ ಬೆನ್ನು ನೀನು ತುರಿಸಿದ್ದೀಯಾ, ನಿನ್ನ ಬೆನ್ನು ನಾನು ತುರಿಸುತ್ತೇನೆ ಎಂದು.
ಅಂಕಣ ಬರೆಯುವ ಕೆಲಸ ಬಹಳ ಸುಲಭವೆಂದೇನೂ ಅಲ್ಲ. ಬರೆಯುವವರು ಪತ್ರಿಕೆಯ ಹಿರಿಯ ಪತ್ರಕರ್ತರಾಗಿದ್ದರೆ, ತಮ್ಮ ಕಿರಿಯ ಸಹೋದ್ಯೋಗಿಗಳನ್ನು ಹೆದರಿಸಿಯೋ, ಪೂಸಿ ಹೊಡೆದೋ ಬರೆಸಬೇಕಾಗುತ್ತದೆ.
ಬರೆಯುವವರು ಓದಬೇಕೆಂದೇನೂ ಇಲ್ಲ. ಸ್ವಲ್ಪವಷ್ಟೇ ಓದುವ ಹವ್ಯಾಸವಿತ್ತೆಂದರೆ ಬಹಳವಾಯಿತು. ಓದಿದನ್ನು ಪೆನ್ನಿನಿಂದ ಮಾರ್ಕು ಮಾಡಿ ನಿಮ್ಮ ಕಿರಿಯ ಸಹೋದ್ಯೋಗಿಗೆ ಹೇಳಿ ಟೈಪ್ ಮಾಡಿಸಿ. ಓದಿದ್ದು ಒಂದೇ ಲೇಖನ, ಒಂದೇ ಪುಸ್ತಕ ಆಗ ಬೇಕೆಂದಿಲ್ಲ. ಸದ್ಯಕ್ಕೆ ನಿಮ್ಮಲಿದ್ದ ಸ್ಕೂಟರ್ ಅಥವಾ ಕಾರು ಪಾರ್ಕಿಂಗ್ ಟಿಕೇಟು ಆದರೂ ಆದೀತು. ಅದರಲ್ಲಿ ಅದೆಷ್ಟು ವಿಷಯವಿದೆ, ನಿಮ್ಮ ಓದುಗರಿಗೆ ತಿಳಿಸಲು. ಈ ವಾರದ ಅಂಕಣ ಅದರಿಂದಲೇ ತುಂಬಿಸಬಹುದು.
ನಿಮ್ಮ ಬಗ್ಗೆ ಓದುಗರಿಗೆ ಮತ್ತಷ್ಟು ಗೌರವ, ಆದರ ಮೂಡಿಸಬೇಕಾದರೆ ನೀವು ವಿಮಾನನಿಲ್ದಾಣಕ್ಕೆ ಯಾರನ್ನೋ ಬಿಡಲು ಅಥವಾ ಕರೆದು ತರಲು ಹೋಗಿದ್ದರೆ ಸಾಕು, ನೀವೇ ವಿದೇಶ ಪ್ರಯಾಣ ಮಾಡಿ ಬಂದ ಹಾಗೆ ಬರೆಯಬಹುದು. ನೀವು ಹೋಗಿದ್ದೀರೋ ಇಲ್ಲವೋ ಎಂದು ನಿಮ್ಮ ಓದುಗರು ನಿಮ್ಮನ್ನು ಕೇಳಲಿಕ್ಕೆ ಬರುವುದಿಲ್ಲ. ನಿಮ್ಮನ್ನು ಅತ್ಯಂತ ಹತ್ತಿರದಿಂದ ಬಲ್ಲವರು ನಿಮ್ಮ ಅಂಕಣವನ್ನು ಓದುವುದಿಲ್ಲ. ಹಾಗಾಗಿ ನೀವು ಚಿಂತೆ ಮಾಡಬೇಕಿಲ್ಲ.
ಅಂಕಣವನ್ನು ಇನ್ನಷ್ಟೂ ಉತ್ತಮಗೊಳಿಸಬೇಕು ಎಂದು ನೀವು ಬಯಸುವಿರಾದರೆ ಕೆಲವೊಂದು ಅಂಕೆಗಳನ್ನು ಓದುಗರು ನಂಬುವಂತೆ ಕೊಡಿರಿ. ಉದಾಹರಣೆಗೆ ವೀರಪ್ಪನ್ ಸಾಯುವುದಕ್ಕಿಂತ ಮೊದಲು ಒಟ್ಟಾರೆ 2419 ಪೊಲೀಸ್ ಅಧಿಕಾರಿಗಳನ್ನು ಕೊಂದಿದ್ದ ಎಂದು ಬರೆಯಿರಿ. ಈಗಿನ ಓದುಗರು ವೀರಪ್ಪನ್ ಅಂದರೆ ಯಾರು ಅಂತ ಕೂಡ ಕೇಳುವುದಿಲ್ಲ, ಅವನು ಯಾಕೆ ಸತ್ತ, ಹೇಗೆ ಸತ್ತ, ಪೋಲಿಸರನ್ನು ಯಾಕೆ ಕೊಂದ, ಅವನ ಮುಖ್ಯ ಉದ್ಯೋಗ ಏನಾಗಿತ್ತು ಎಂದು ಕೂಡ ಓದುಗರು ಕೇಳುವುದಿಲ್ಲ. ಇನ್ನು ನೀವು ಬರೆದ ಸಂಖ್ಯೆಯನ್ನು ಓದಿ ನಿಮ್ಮ ನೆನಪು ಶಕ್ತಿಯಬಗ್ಗೆ ಮತ್ತು ಅಂಕಣದ ಪರಿಪಕ್ವತೆಯ ಬಗ್ಗೆ ಅಭಿಮಾನಿ ಓದುಗ ಕೂಡಾ ನೀವು ಎಲ್ಲಿಯಾದರೂ ರಸ್ತೆ ಬದಿಗೆ ಉಚ್ಚೆ ಹೊಯ್ಯಲು ನಿಂತಾಗ ಪಕ್ಕದಲ್ಲಿಯೇ ನೀವು ಮಾಡುತ್ತಿರುವ ಕೆಲಸವನ್ನೇ ಮಾಡುತ್ತಾ ಅಭಿಮಾನಿ ಓದುಗ ನಿಮ್ಮನ್ನು ಗುರುತಿಸಿ ನಿಮ್ಮ ಅಂಕಣವನ್ನು ಹೊಗಳಿ ನಿಮ್ಮೊಂದಿಗೆ ಹಸ್ತಲಾಘವ ಮಾಡಲು ಕೈಚಾಚಿದರೆ ಯಾವುದೇ ಮುಜುಗರವಿಲ್ಲದೆ ಕೈಕೊಡಿ. ಮಂದಿನವಾರ ರಸ್ತೆಬದಿಯಲ್ಲಿ ಉಚ್ಚೆಹೊಯ್ಯುವ ಕುರಿತು ಅಂಕಣ ಬರೆಯಬಹುದೆಂದು ನಾನು ಬೇರೆ ಹೇಳಬೇಕಿಲ್ಲ ನಿಮಗೆ. ನೀವು ಈಗ ಜಾಣರಾಗಿರುತ್ತೀರಿ. ನಾವು ಮುಂದಿನ ವಾರ ಅದನ್ನೇ ಓದುತ್ತೇವೆ.
ಅಂಕಣಕಾರರಾಗಿ ನೀವು ಜನಪ್ರಿಯರಾಗಬೇಕಿದ್ದರೆ ಜನರ ಒಳತೋಟಿಯನ್ನು ಅರಿತವರಂತೆ ಬರೆಯ ಬೇಕಾಗುತ್ತದೆ. ಅದಕ್ಕೆ ನೀವು ದಿನಾ ಹೋಗುವ ಪಾನ್ ಅಥವಾ ಪಾನ ಅಂಗಡಿಯ ಮುಂದೆ ಸಿಗುವ ಸಂಭಾಷಣೆಗಳನ್ನು ಸ್ವಲ್ಪ ಹೊತ್ತು ಆಲಿಸದರೆ ಸಾಕು. ಬಿಜೆಪಿಯ ಮುಖ್ಯಮಂತ್ರಿಯಾಗಿ ಖಂಡಿತವಾಗಿಯೂ ಈ ಬಾರಿ ಬಂಗಾರಪ್ಪನವರು ಆರಿಸಿಬರುತ್ತಾರೆ ಎಂದು ಬರೆಯಿರಿ. ಬಂಗಾರಪ್ಪನವರು ಈಗ ಯಾವ ಪಕ್ಷದಲ್ಲಿದ್ದಾರೆ ಎಂದು ನಿಮ್ಮ ಅಂಕಣದ ಯಾವ ಓದುಗನಿಗೂ ಗೊತ್ತಿರುವುದಿಲ್ಲ. ಒಂದು ವೇಳೆ ನೀವು ಬರೆದುದು ಸತ್ಯವಾದರೆ ಅದರ ಕುರಿತು ಮತ್ತೊಂದು ಅಂಕಣ ಬರೆಯಿರಿ ಅಥವಾ ನೀವು ಅಂಕಣ ಬರೆಯುತ್ತಿರುವ ಪತ್ರಿಕೆಯ ಇನ್ನೋರ್ವ ಅಂಕಣಕಾರನಿಗೆ ಹೇಳಿ ನಿಮ್ಮ ಅಂಕಣದ ಕುರಿತು ಬರೆಯಲು ಹೇಳಿ.
ಅಂಕಣ ಬರೆಯುವ ಇನ್ನೊಂದು ರೀತಿಯಿದೆ. ಅದು ಕೂಡ ಅಷ್ಟೇನು ಸುಲಭವಲ್ಲ, ನೀವು ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ. ನೀವು ಬರೆಯ ಬೇಕಾದ ವಿಷಯವನ್ನು ಗೂಗಲ್ ಮಾಡಿ. ಬಂದ ಫಲಿತಾಂಶಗಳನ್ನು ನಿಮ್ಮ ಕಿರಿಯ ಸಹೋದ್ಯೋಗಿಗೆ ಹೇಳಿ ಭಟ್ಟಿ ಇಳಿಸಿ.
ಇನ್ನೂ ಒಂದು ಉಪಾಯವೆಂದರೆ ಯಾವುದೇ ಬ್ಲಾಗಿನ ಹಳೆಯ ಬರಹವೊಂದನ್ನು ಕಾಪಿ ಪೇಸ್ಟ್ ಮಾಡಿ. ಬ್ಲಾಗ್ ಬರಹಗಾರ ನಿಮ್ಮ ಅಂಕಣವನ್ನು ಓದುವುದಿಲ್ಲ ಮತ್ತು ನಿಮ್ಮ ಓದುಗರು ಆ ಬ್ಲಾಗ್ ಬರಹವನ್ನು ಓದಿರುವುದಿಲ್ಲ.
ನೀವು ಹೊಸ ಅಂಕಣಕಾರರಾಗಿ ಬರುವಿರಾದರೆ ನೀವು ಎರಡು ಪತ್ರಿಕೆಯ ಕೇವಲ ಎರಡು ಅಂಕಣಕಾರರ ಬರಹಗಳನ್ನು ಓದಿ. ಅವರು ಮಾಡುತ್ತಿರುವ ತಪ್ಪುಗಳನ್ನು ನೀವೂ ಮಾಡಿ. ಎಲ್ಲವೂ ಸರಿಯಾಗುತ್ತದೆ. ನಿಮ್ಮ ಅಂಕಣಗಳು ಆರು ತಿಂಗಳಿಂದ ಪ್ರಕಟವಾಗುತ್ತಿವೆ ಎಂದರೆ ಅವುಗಳನ್ನೆಲ್ಲಾ ಒಟ್ಟಾಗಿಸಿ ಪುಸ್ತಕಮಾಡಿ ಪ್ರಕಟಿಸಿ. ಬಿಡುಗಡೆ ಸಮಾರಂಭಮಾಡಿ ಇದ್ದವರಿಗೆಲ್ಲಾ ಉಚಿತವಾಗಿ ಪ್ರತಿಗಳನ್ನು ಹಂಚಿರಿ. ಉಳಿದುದನ್ನು ನಿಮ್ಮ ಶಾಲೆಯ, ಹೈಸ್ಕೂಲಿನ ಮಾಸ್ತರುಗಳಿಗೆ ಕಳುಹಿಸಿ. ನಿಮಗೆ ಶ್ರೇಷ್ಟ ಅಂಕಣಕಾರ ಪ್ರಶಸ್ತಿಯನ್ನು ನಿಮ್ಮ ಊರಿನ ಭಜನಾ ಮಂಡಲಿಯವರು ಕೊಟ್ಟರೂ ಕೊಡಬಹುದು.
ಆಲ್ ದ ಬೆಸ್ಟ್.
ಅಂಕಣ ಬರೆಸುವುದೂ ಕೂಡಾ ಕೆಲವೊಮ್ಮೆ ಪತ್ರಿಕೆಯ ಸಂಪಾದಕರಿಗೆ ಅನಿವಾರ್ಯವಾಗಿ ಬಿಡುತ್ತದೆ. ತಮ್ಮ ಗೆಳೆಯರೋ, ಪರಿಚಯದವರೋ ತಮಗೆ ಯಾವುದಾದರೂ ಸಹಾಯ ಮಾಡಿದ್ದರೆ ಅದಕ್ಕೆ ಪ್ರತಿಯಾಗಿ ಅಂತಹವರಿಂದ ಅಂಕಣ ಬರೆಸಬಹುದು. ನನ್ನ ಬೆನ್ನು ನೀನು ತುರಿಸಿದ್ದೀಯಾ, ನಿನ್ನ ಬೆನ್ನು ನಾನು ತುರಿಸುತ್ತೇನೆ ಎಂದು.
ಅಂಕಣ ಬರೆಯುವ ಕೆಲಸ ಬಹಳ ಸುಲಭವೆಂದೇನೂ ಅಲ್ಲ. ಬರೆಯುವವರು ಪತ್ರಿಕೆಯ ಹಿರಿಯ ಪತ್ರಕರ್ತರಾಗಿದ್ದರೆ, ತಮ್ಮ ಕಿರಿಯ ಸಹೋದ್ಯೋಗಿಗಳನ್ನು ಹೆದರಿಸಿಯೋ, ಪೂಸಿ ಹೊಡೆದೋ ಬರೆಸಬೇಕಾಗುತ್ತದೆ.
ಬರೆಯುವವರು ಓದಬೇಕೆಂದೇನೂ ಇಲ್ಲ. ಸ್ವಲ್ಪವಷ್ಟೇ ಓದುವ ಹವ್ಯಾಸವಿತ್ತೆಂದರೆ ಬಹಳವಾಯಿತು. ಓದಿದನ್ನು ಪೆನ್ನಿನಿಂದ ಮಾರ್ಕು ಮಾಡಿ ನಿಮ್ಮ ಕಿರಿಯ ಸಹೋದ್ಯೋಗಿಗೆ ಹೇಳಿ ಟೈಪ್ ಮಾಡಿಸಿ. ಓದಿದ್ದು ಒಂದೇ ಲೇಖನ, ಒಂದೇ ಪುಸ್ತಕ ಆಗ ಬೇಕೆಂದಿಲ್ಲ. ಸದ್ಯಕ್ಕೆ ನಿಮ್ಮಲಿದ್ದ ಸ್ಕೂಟರ್ ಅಥವಾ ಕಾರು ಪಾರ್ಕಿಂಗ್ ಟಿಕೇಟು ಆದರೂ ಆದೀತು. ಅದರಲ್ಲಿ ಅದೆಷ್ಟು ವಿಷಯವಿದೆ, ನಿಮ್ಮ ಓದುಗರಿಗೆ ತಿಳಿಸಲು. ಈ ವಾರದ ಅಂಕಣ ಅದರಿಂದಲೇ ತುಂಬಿಸಬಹುದು.
ನಿಮ್ಮ ಬಗ್ಗೆ ಓದುಗರಿಗೆ ಮತ್ತಷ್ಟು ಗೌರವ, ಆದರ ಮೂಡಿಸಬೇಕಾದರೆ ನೀವು ವಿಮಾನನಿಲ್ದಾಣಕ್ಕೆ ಯಾರನ್ನೋ ಬಿಡಲು ಅಥವಾ ಕರೆದು ತರಲು ಹೋಗಿದ್ದರೆ ಸಾಕು, ನೀವೇ ವಿದೇಶ ಪ್ರಯಾಣ ಮಾಡಿ ಬಂದ ಹಾಗೆ ಬರೆಯಬಹುದು. ನೀವು ಹೋಗಿದ್ದೀರೋ ಇಲ್ಲವೋ ಎಂದು ನಿಮ್ಮ ಓದುಗರು ನಿಮ್ಮನ್ನು ಕೇಳಲಿಕ್ಕೆ ಬರುವುದಿಲ್ಲ. ನಿಮ್ಮನ್ನು ಅತ್ಯಂತ ಹತ್ತಿರದಿಂದ ಬಲ್ಲವರು ನಿಮ್ಮ ಅಂಕಣವನ್ನು ಓದುವುದಿಲ್ಲ. ಹಾಗಾಗಿ ನೀವು ಚಿಂತೆ ಮಾಡಬೇಕಿಲ್ಲ.
ಅಂಕಣವನ್ನು ಇನ್ನಷ್ಟೂ ಉತ್ತಮಗೊಳಿಸಬೇಕು ಎಂದು ನೀವು ಬಯಸುವಿರಾದರೆ ಕೆಲವೊಂದು ಅಂಕೆಗಳನ್ನು ಓದುಗರು ನಂಬುವಂತೆ ಕೊಡಿರಿ. ಉದಾಹರಣೆಗೆ ವೀರಪ್ಪನ್ ಸಾಯುವುದಕ್ಕಿಂತ ಮೊದಲು ಒಟ್ಟಾರೆ 2419 ಪೊಲೀಸ್ ಅಧಿಕಾರಿಗಳನ್ನು ಕೊಂದಿದ್ದ ಎಂದು ಬರೆಯಿರಿ. ಈಗಿನ ಓದುಗರು ವೀರಪ್ಪನ್ ಅಂದರೆ ಯಾರು ಅಂತ ಕೂಡ ಕೇಳುವುದಿಲ್ಲ, ಅವನು ಯಾಕೆ ಸತ್ತ, ಹೇಗೆ ಸತ್ತ, ಪೋಲಿಸರನ್ನು ಯಾಕೆ ಕೊಂದ, ಅವನ ಮುಖ್ಯ ಉದ್ಯೋಗ ಏನಾಗಿತ್ತು ಎಂದು ಕೂಡ ಓದುಗರು ಕೇಳುವುದಿಲ್ಲ. ಇನ್ನು ನೀವು ಬರೆದ ಸಂಖ್ಯೆಯನ್ನು ಓದಿ ನಿಮ್ಮ ನೆನಪು ಶಕ್ತಿಯಬಗ್ಗೆ ಮತ್ತು ಅಂಕಣದ ಪರಿಪಕ್ವತೆಯ ಬಗ್ಗೆ ಅಭಿಮಾನಿ ಓದುಗ ಕೂಡಾ ನೀವು ಎಲ್ಲಿಯಾದರೂ ರಸ್ತೆ ಬದಿಗೆ ಉಚ್ಚೆ ಹೊಯ್ಯಲು ನಿಂತಾಗ ಪಕ್ಕದಲ್ಲಿಯೇ ನೀವು ಮಾಡುತ್ತಿರುವ ಕೆಲಸವನ್ನೇ ಮಾಡುತ್ತಾ ಅಭಿಮಾನಿ ಓದುಗ ನಿಮ್ಮನ್ನು ಗುರುತಿಸಿ ನಿಮ್ಮ ಅಂಕಣವನ್ನು ಹೊಗಳಿ ನಿಮ್ಮೊಂದಿಗೆ ಹಸ್ತಲಾಘವ ಮಾಡಲು ಕೈಚಾಚಿದರೆ ಯಾವುದೇ ಮುಜುಗರವಿಲ್ಲದೆ ಕೈಕೊಡಿ. ಮಂದಿನವಾರ ರಸ್ತೆಬದಿಯಲ್ಲಿ ಉಚ್ಚೆಹೊಯ್ಯುವ ಕುರಿತು ಅಂಕಣ ಬರೆಯಬಹುದೆಂದು ನಾನು ಬೇರೆ ಹೇಳಬೇಕಿಲ್ಲ ನಿಮಗೆ. ನೀವು ಈಗ ಜಾಣರಾಗಿರುತ್ತೀರಿ. ನಾವು ಮುಂದಿನ ವಾರ ಅದನ್ನೇ ಓದುತ್ತೇವೆ.
ಅಂಕಣಕಾರರಾಗಿ ನೀವು ಜನಪ್ರಿಯರಾಗಬೇಕಿದ್ದರೆ ಜನರ ಒಳತೋಟಿಯನ್ನು ಅರಿತವರಂತೆ ಬರೆಯ ಬೇಕಾಗುತ್ತದೆ. ಅದಕ್ಕೆ ನೀವು ದಿನಾ ಹೋಗುವ ಪಾನ್ ಅಥವಾ ಪಾನ ಅಂಗಡಿಯ ಮುಂದೆ ಸಿಗುವ ಸಂಭಾಷಣೆಗಳನ್ನು ಸ್ವಲ್ಪ ಹೊತ್ತು ಆಲಿಸದರೆ ಸಾಕು. ಬಿಜೆಪಿಯ ಮುಖ್ಯಮಂತ್ರಿಯಾಗಿ ಖಂಡಿತವಾಗಿಯೂ ಈ ಬಾರಿ ಬಂಗಾರಪ್ಪನವರು ಆರಿಸಿಬರುತ್ತಾರೆ ಎಂದು ಬರೆಯಿರಿ. ಬಂಗಾರಪ್ಪನವರು ಈಗ ಯಾವ ಪಕ್ಷದಲ್ಲಿದ್ದಾರೆ ಎಂದು ನಿಮ್ಮ ಅಂಕಣದ ಯಾವ ಓದುಗನಿಗೂ ಗೊತ್ತಿರುವುದಿಲ್ಲ. ಒಂದು ವೇಳೆ ನೀವು ಬರೆದುದು ಸತ್ಯವಾದರೆ ಅದರ ಕುರಿತು ಮತ್ತೊಂದು ಅಂಕಣ ಬರೆಯಿರಿ ಅಥವಾ ನೀವು ಅಂಕಣ ಬರೆಯುತ್ತಿರುವ ಪತ್ರಿಕೆಯ ಇನ್ನೋರ್ವ ಅಂಕಣಕಾರನಿಗೆ ಹೇಳಿ ನಿಮ್ಮ ಅಂಕಣದ ಕುರಿತು ಬರೆಯಲು ಹೇಳಿ.
ಅಂಕಣ ಬರೆಯುವ ಇನ್ನೊಂದು ರೀತಿಯಿದೆ. ಅದು ಕೂಡ ಅಷ್ಟೇನು ಸುಲಭವಲ್ಲ, ನೀವು ಸ್ವಲ್ಪ ಕೆಲಸ ಮಾಡಬೇಕಾಗುತ್ತದೆ. ನೀವು ಬರೆಯ ಬೇಕಾದ ವಿಷಯವನ್ನು ಗೂಗಲ್ ಮಾಡಿ. ಬಂದ ಫಲಿತಾಂಶಗಳನ್ನು ನಿಮ್ಮ ಕಿರಿಯ ಸಹೋದ್ಯೋಗಿಗೆ ಹೇಳಿ ಭಟ್ಟಿ ಇಳಿಸಿ.
ಇನ್ನೂ ಒಂದು ಉಪಾಯವೆಂದರೆ ಯಾವುದೇ ಬ್ಲಾಗಿನ ಹಳೆಯ ಬರಹವೊಂದನ್ನು ಕಾಪಿ ಪೇಸ್ಟ್ ಮಾಡಿ. ಬ್ಲಾಗ್ ಬರಹಗಾರ ನಿಮ್ಮ ಅಂಕಣವನ್ನು ಓದುವುದಿಲ್ಲ ಮತ್ತು ನಿಮ್ಮ ಓದುಗರು ಆ ಬ್ಲಾಗ್ ಬರಹವನ್ನು ಓದಿರುವುದಿಲ್ಲ.
ನೀವು ಹೊಸ ಅಂಕಣಕಾರರಾಗಿ ಬರುವಿರಾದರೆ ನೀವು ಎರಡು ಪತ್ರಿಕೆಯ ಕೇವಲ ಎರಡು ಅಂಕಣಕಾರರ ಬರಹಗಳನ್ನು ಓದಿ. ಅವರು ಮಾಡುತ್ತಿರುವ ತಪ್ಪುಗಳನ್ನು ನೀವೂ ಮಾಡಿ. ಎಲ್ಲವೂ ಸರಿಯಾಗುತ್ತದೆ. ನಿಮ್ಮ ಅಂಕಣಗಳು ಆರು ತಿಂಗಳಿಂದ ಪ್ರಕಟವಾಗುತ್ತಿವೆ ಎಂದರೆ ಅವುಗಳನ್ನೆಲ್ಲಾ ಒಟ್ಟಾಗಿಸಿ ಪುಸ್ತಕಮಾಡಿ ಪ್ರಕಟಿಸಿ. ಬಿಡುಗಡೆ ಸಮಾರಂಭಮಾಡಿ ಇದ್ದವರಿಗೆಲ್ಲಾ ಉಚಿತವಾಗಿ ಪ್ರತಿಗಳನ್ನು ಹಂಚಿರಿ. ಉಳಿದುದನ್ನು ನಿಮ್ಮ ಶಾಲೆಯ, ಹೈಸ್ಕೂಲಿನ ಮಾಸ್ತರುಗಳಿಗೆ ಕಳುಹಿಸಿ. ನಿಮಗೆ ಶ್ರೇಷ್ಟ ಅಂಕಣಕಾರ ಪ್ರಶಸ್ತಿಯನ್ನು ನಿಮ್ಮ ಊರಿನ ಭಜನಾ ಮಂಡಲಿಯವರು ಕೊಟ್ಟರೂ ಕೊಡಬಹುದು.
ಆಲ್ ದ ಬೆಸ್ಟ್.
Friday, July 29, 2011
ಹಸಿದು ಹಲಸು ...
ನಮ್ಮ ಬಿತ್ತಿಲಿನಲ್ಲಿ ಈ ವರ್ಷ ಪೆಲಕ್ಕಾಯಿ ತುಂಬಾ ಉಂಟು. ಪೆಲಕ್ಕಾಯಿ ಬಿತ್ತಿಲಿನ ಮರಗಳಲ್ಲಿ ಇರುವುದು. ನಮ್ಮ ಹಳೆಯ ಮರಗಳನ್ನೆಲ್ಲಾ ಕಳೆದ ಮರಿಯಾಲ ಮುಗಿದ ನಂತರ ಕಡಿದದ್ದು. ಮಿತ್ತ ಪುಣಿಯಲ್ಲಿ ಹೊಸ ಮನೆ ಕಟ್ಟಿದ್ದಕ್ಕೆ ಪೆಲತ ಮರತ ಬಾಕಿಲು ಕಿಟಿಕಿ ಮಾಡಿದ್ದು. ಬಿತ್ತಿಲಿನಲ್ಲಿ ಹೊಸ ಮರಗಳು ಬಂದದ್ದು ನಮಗೆ ಗೊತ್ತಾದದ್ದು ಹಳೆ ಮರಗಳನ್ನು ಕಡಿದಾಗಲೇ. ನಾವೆಣಿಸಿದ್ದು ಈ ವರ್ಷ ಪೆಲಕ್ಕಾಯಿ ಸಿಗಲಿಕ್ಕಿಲ್ಲ ಎಂದು. ಆದರೆ ಬಿತ್ತಿಲಿನ ಎಲ್ಲಾ ಹೊಸ ಮರಗಳಲ್ಲಿ ಈ ವರ್ಷ ಎಂಚಿನ ಪಸಲ್ ಮಾರಯ್ರೆ. ಒಂದು ಮರದಲ್ಲಿ ಮಾತ್ರ ನೋಡಬೇಕು. ಸಪೂರದ ಗೆಲ್ಲಿನಲ್ಲಿ ಕೂಡ ಗುಜ್ಜೆ ಆಗಿದೆ. ಗುಜ್ಜೆ ದೊಡ್ಡದು ಆದರೆ ನಮ್ಮ ಮರದ ಎಗೆ ತುಂಡಾಗಿ ಕೆಳಗೆ ಬೀಳ ಬಹುದು ಅಂತ ಅದನ್ನು ಕಜಿಪು ಮಾಡಲಿಕ್ಕೆ ಹೇಳಿದ್ದು. ಈಗ ಈ ಮಳೆಗೆ ಪರ್ಂದ್ ಪೆಲಕ್ಕಾಯಿ ಯಾರಿಗೆ ಬೇಕು ಹೇಳಿ. ಸುಮ್ಮನೆ ಅದು ಬಿದ್ದು ಹಾಳಾಗುತ್ತದೆ. ಬಿತ್ತಿಲಿಗೆ ಹೊಗಲಿಕ್ಕೆ ಆಗುವುದಿಲ್ಲ. ಉಮಿಲ್ ಅಂದ್ರೆ ಮಾರಾಯ್ರೆ ಬೈರಾಸು ಸುತ್ತಿಕೊಂಡು ಎಲ್ಲಿಯಾದರೂ ಹೋದೆವಾ ನಮ್ಮ ಕಾಲು ಕೂಡ ಪೆಲಕ್ಕಾಯಿಯ ರೆಚ್ಚೆಯ ಹಾಗೆ ಆಗುತ್ತದೆ. ಉಮಿಲ್ ತುಚ್ಚಿ.
ಪೆಲಕ್ಕಾಯಿ ಮರದಲ್ಲೇ ಪರಿಂದಿದರೆ ಈ ಮಳೆಗೆ ಅದು ಅಷ್ಟು ರುಚಿ ಇರುವುದಿಲ್ಲ ಎಂದು ಒಳ್ಳೆ ಬುಲೆತ್ ನೋಡಿ ಮೊದಲೇ ಕಡ್ಪಿ ಅದನ್ನು ಸ್ವಲ್ಪ ಬೆಚ್ಚ ಜಾಗದಲ್ಲಿ ಇಟ್ಟರೆ ಅದು ಸೀಪೆ ಸೀಪೆ ಆಗುತ್ತದೆ. ಪೆಲಕ್ಕಾಯಿ ಮೂರಲಿಕ್ಕೆ ಮಾತ್ರ ಈಗ ಯಾರು ದುಂಬು ಬರುವುದಿಲ್ಲ. ಕೈಯಲ್ಲಿ ಮೇಣ ಆಗುತ್ತದೆ ಅಂತ. ಅದಕ್ಕೆ ಕೆಲವರು ಒಂದಾ ಮೊದಲೇ ತಾರಾಯಿದೆಣ್ಣೆ ಕೈಗೆ ಪೂಜಿ ಮೇಣ ಅಂಟದಂತೆ ನೋಡ್ತಾರೆ. ಇಲ್ಲದಿದ್ದರೆ ಮೂರಿದ ನಂತರ ತಾರಾಯಿದೆಣ್ಣೆ ಪೂಜುತ್ತಾರೆ.
ಮೊನ್ನೆ ಹೀಗೆಯೇ ನಾನು ಕೊಟ್ಯದಲ್ಲಿದ್ದ ಪೆಲಕ್ಕಾಯಿ ಪರಿಂದಿದೆ ಎಂದು ಪರಿಮಳ ಬರುವಾಗ ಅದನ್ನು ಮೂರಲಿಕ್ಕೆ ಕುಳಿತ್ತದ್ದು. ನಾನು ಮೊದಲೇ ತಾರಾಯಿದೆಣ್ಣೆ ಪೂಜಿಲಿಕ್ಕೆ ಮರೆತ್ತದ್ದು. ಮತ್ತೆ ಎಂತ ಮಾಡುವುದು. ಆಗಲಿ ಅಂತ ಮುಂದುವರಿಸಿದ್ದೇ. ಇಡೀ ಪೂರಾ ಪೆಲಕ್ಕಾಯಿ ಮೂರಿದ್ದು. ನಾಕು ನಾಕು ಪಚ್ಚಿಲ್ ಅಂತ ಹೇಳಿ ಎಲ್ಲರೂ ತಿಂದು ಪೆಲಕ್ಕಾಯಿ ಮುಗಿಯಿತು. ನಾನು ಮೇಣವನ್ನು ಕೈಗೆ ಕಾಲಿಗೆ ತಲೆಗೆ ಎಂದು ಎಲ್ಲ ಕಡೆ ಅಂಟಿಸಿದ್ದು. ಅದು ಉಮಿಲ್ ಓಡಿಸಬೇಕಲ್ಲವಾ. ಅದಕ್ಕೆ.
ಕೈಗೆ ಅಂಟಿದನ್ನು ಬಿಡಿಸುವುದು ಹೇಗೆ ಅಂತ ಮಂಡೆಬೆಚ್ಚದಲ್ಲಿದ್ದೆ. ತಾರಾಯಿದೆಣ್ಣೆ ಹಾಕಿದರೂ ಅದು ಸುಲಭದಲ್ಲಿ ಬಿಡಬೇಕಲ್ಲವ.
ಅಂಟುವುದು ಅದರ ಗುಣ. ಬೆಚ್ಚ ನೀರು ಹಾಕಿ ತೊಳೆದರೆ ಎಂಚಾ ಎಂದು ಕೂಡಾ ನೋಡಿ ಆಯಿತು. ಅದು ಮಯಣ ಮಾರಾಯ, ಕೈ ಬಿಡುವುದಿಲ್ಲ. ಅದು ಒಮ್ಮೆಗೇ ಹೋಗಲಿಕ್ಕಿಲ್ಲ. ನಿಧಾನವಾಗಿ ಹೋಗಬಹುದು. ನಾಳೆ ಆಗುವಾಗ ಎಲ್ಲಾ ಹೋಗಬಹುದು ಅಂತಾ ಎಲ್ಲ ಹೇಳಿದರು. ಯಾರೋ ಹೇಳಿದರು ಅಂತ ಅದು ಹೋಗುತ್ತದೋ. ಅಂಟಿದ್ದು ನನ್ನ ಕೈಗೆ ಅಲ್ಲವೋ. ಅದರ ಉಪದ್ರ ನನಗೆ ಮಾತ್ರ ಗೊತ್ತು ಅಲ್ಲವ.
ದಿಲ್ಲಿಯ ನಾಯ್ಕರು ಹೇಳಿದರೆ ಅದು ಬಿಡುತ್ತದೋ. ನಮ್ಮ ಕೈಗೆ ಎಷ್ಟು ಹೊತ್ತು ಅದು ಅಂಟಿಕೊಂಡಿರುತ್ತದೋ ಅಷ್ಟೂ ಹೊತ್ತು ನಮ್ಮ ಕೈ ಮತ್ತೆ ಮೈ ಎಲ್ಲಾ ಪೆಲಕ್ಕಾಯಿ ಪರಿಮಳ ಬರುತ್ತದೆ. ಹಾಗೆ ನಾವು ಎಲ್ಲಿಯಾದರೂ ಹೊರಗೆ ಜಗಲಿಯಲ್ಲಿ ಕುಳಿತೆವೋ ಅಲ್ಲಿಗೆ ನಾಯಿ ಕೂಡ ಬಂದು ನಮ್ಮನ್ನು ಮೂಸುತ್ತದೆ. ಅದಕ್ಕೆ ಹೇಳುವುದು, ಪೆಲಕ್ಕಾಯಿ ಮೂರಿದವರಿಗೆ ಮಾತ್ರ ಗೊತ್ತು ಅದರ ಸುಖ ಅಥವಾ ದುಃಖ. ನಾವು ಪೆಲಕ್ಕಾಯಿ ಪರಿಮಳ ಬರುತ್ತೇವೆ ಅಂತ ಹೇಳಿ ಇದ್ದ ಕಾಟುನಾಯಿಗಳಿಂದ ಮೂಸಿಸಲ್ಪಡಿಲಿಕ್ಕೆ ಆಗುತ್ತದೋ? ಪೆಲಕ್ಕಾಯಿ ನಾವೆ ಮೂರಿದ್ದು ಎಂದುದರಿಂದ ಅಲ್ಲವೋ ನಾವೇ ಪೆಲಕ್ಕಾಯಿ ಪರಿಮಳ ಬರುವುದು. ಪೆಲಕ್ಕಾಯಿ ತಿಂದವರು ಸ್ವಲ್ಪ ಹೊತ್ತು ಪೆಲಕ್ಕಾಯಿ ಪರಿಮಳ ಬರಬಹುದು. ನಾವು ಮೂರಿದ್ದರಿಂದ ನಾವು ತಿಂದಿದ್ದೇವೆ ಅಂತ ಕಾಟುನಾಯಿ ಕೂಡ ನಮ್ಮನ್ನು ಮೂಸಿಲಿಕ್ಕೆ ಬರುತ್ತದೆ.
ಈ ಮಳೆಗೆ ಎಲ್ಲಿಗೂ ಹೋಗಲಿಕ್ಕೆ ಆಗುವುದಿಲ್ಲ ಎಂದು ಆಚೆ ತೋಟದ ಭಟ್ರು ಮತ್ತು ಈಚೆ ತೋಟದ ಶೆಟ್ರು ಟಿವಿ ನೋಡಿ ನೋಡಿ ಕಣ್ಣು ಕೆಂಪು ಮಾಡಿಕೊಂಡು ಬಯ್ಯದ ಪೊರ್ತುಗು ಮಳೆ ಬಿಟ್ಟಾಗ ನಮ್ಮ ಬಿತ್ತಿಲಿನ ಹತ್ತಿರದಲ್ಲಿ ಮಾತಾಡುವುದು ಕೇಳಿ ನಾನು ಕೂಡ ಅಲ್ಲಿಗೆ ಹೋದರೆ ಅವರು ಎಂತ ಹೇಳುವುದು ಗೊತ್ತುಂಟಾ? ಪೆಲಕ್ಕಾಯಿ ಮೂರಿ ಬಂದದ್ದಾ ಎಂದು. ನಾನು ಹೇಳಿದೆ ನೀವು ಎಂತದ್ದು ಮಾಡಿದ್ದು ಪುಲ್ಯದಿಂದ ಬಯ್ಯ ಮುಟ್ಟ ಎಂದು. ಅವರು ಹೇಳಿದರು: ಮುಖ್ಯಮಂತ್ರಿಗಳು ಯಾವಾಗ ರಾಜೀನಾಮೆ ಕೊಡುತ್ತಾರೆ ಅಂತ ಕಾದು ಕಾದು ಸಾಕಾಯಿತು ಅಂತ. ಕಾದು ಕಾದು ನೀವು ಮುದುಕರಾಗುವಿರಿ. ಅವರು ರಾಜೀನಾಮೆ ಕೊಡುವ ಹಾಗೆ ಕಾಣುವುದಿಲ್ಲ. ಅವರು ಅಧಿಕಾರಕ್ಕೆ ಅಂಟಿದ್ದಾರೆ ಮಾರಾಯ್ರೆ, ನನ್ನ ಮೈಗೆ ಪೆಲಕ್ಕಾಯಿ ಪರಿಮಳ ಅಂಟಿದ ಹಾಗೆ, ಎಂದೆ. ನಾಳೆ ಅಮಾಸೆ ಮುಗಿಯಲಿ. ಮತ್ತೆ ನೋಡುವಾ ಆಯಿತಾ.
ಪೆಲಕ್ಕಾಯಿ ಮರದಲ್ಲೇ ಪರಿಂದಿದರೆ ಈ ಮಳೆಗೆ ಅದು ಅಷ್ಟು ರುಚಿ ಇರುವುದಿಲ್ಲ ಎಂದು ಒಳ್ಳೆ ಬುಲೆತ್ ನೋಡಿ ಮೊದಲೇ ಕಡ್ಪಿ ಅದನ್ನು ಸ್ವಲ್ಪ ಬೆಚ್ಚ ಜಾಗದಲ್ಲಿ ಇಟ್ಟರೆ ಅದು ಸೀಪೆ ಸೀಪೆ ಆಗುತ್ತದೆ. ಪೆಲಕ್ಕಾಯಿ ಮೂರಲಿಕ್ಕೆ ಮಾತ್ರ ಈಗ ಯಾರು ದುಂಬು ಬರುವುದಿಲ್ಲ. ಕೈಯಲ್ಲಿ ಮೇಣ ಆಗುತ್ತದೆ ಅಂತ. ಅದಕ್ಕೆ ಕೆಲವರು ಒಂದಾ ಮೊದಲೇ ತಾರಾಯಿದೆಣ್ಣೆ ಕೈಗೆ ಪೂಜಿ ಮೇಣ ಅಂಟದಂತೆ ನೋಡ್ತಾರೆ. ಇಲ್ಲದಿದ್ದರೆ ಮೂರಿದ ನಂತರ ತಾರಾಯಿದೆಣ್ಣೆ ಪೂಜುತ್ತಾರೆ.
ಮೊನ್ನೆ ಹೀಗೆಯೇ ನಾನು ಕೊಟ್ಯದಲ್ಲಿದ್ದ ಪೆಲಕ್ಕಾಯಿ ಪರಿಂದಿದೆ ಎಂದು ಪರಿಮಳ ಬರುವಾಗ ಅದನ್ನು ಮೂರಲಿಕ್ಕೆ ಕುಳಿತ್ತದ್ದು. ನಾನು ಮೊದಲೇ ತಾರಾಯಿದೆಣ್ಣೆ ಪೂಜಿಲಿಕ್ಕೆ ಮರೆತ್ತದ್ದು. ಮತ್ತೆ ಎಂತ ಮಾಡುವುದು. ಆಗಲಿ ಅಂತ ಮುಂದುವರಿಸಿದ್ದೇ. ಇಡೀ ಪೂರಾ ಪೆಲಕ್ಕಾಯಿ ಮೂರಿದ್ದು. ನಾಕು ನಾಕು ಪಚ್ಚಿಲ್ ಅಂತ ಹೇಳಿ ಎಲ್ಲರೂ ತಿಂದು ಪೆಲಕ್ಕಾಯಿ ಮುಗಿಯಿತು. ನಾನು ಮೇಣವನ್ನು ಕೈಗೆ ಕಾಲಿಗೆ ತಲೆಗೆ ಎಂದು ಎಲ್ಲ ಕಡೆ ಅಂಟಿಸಿದ್ದು. ಅದು ಉಮಿಲ್ ಓಡಿಸಬೇಕಲ್ಲವಾ. ಅದಕ್ಕೆ.
ಕೈಗೆ ಅಂಟಿದನ್ನು ಬಿಡಿಸುವುದು ಹೇಗೆ ಅಂತ ಮಂಡೆಬೆಚ್ಚದಲ್ಲಿದ್ದೆ. ತಾರಾಯಿದೆಣ್ಣೆ ಹಾಕಿದರೂ ಅದು ಸುಲಭದಲ್ಲಿ ಬಿಡಬೇಕಲ್ಲವ.
ಅಂಟುವುದು ಅದರ ಗುಣ. ಬೆಚ್ಚ ನೀರು ಹಾಕಿ ತೊಳೆದರೆ ಎಂಚಾ ಎಂದು ಕೂಡಾ ನೋಡಿ ಆಯಿತು. ಅದು ಮಯಣ ಮಾರಾಯ, ಕೈ ಬಿಡುವುದಿಲ್ಲ. ಅದು ಒಮ್ಮೆಗೇ ಹೋಗಲಿಕ್ಕಿಲ್ಲ. ನಿಧಾನವಾಗಿ ಹೋಗಬಹುದು. ನಾಳೆ ಆಗುವಾಗ ಎಲ್ಲಾ ಹೋಗಬಹುದು ಅಂತಾ ಎಲ್ಲ ಹೇಳಿದರು. ಯಾರೋ ಹೇಳಿದರು ಅಂತ ಅದು ಹೋಗುತ್ತದೋ. ಅಂಟಿದ್ದು ನನ್ನ ಕೈಗೆ ಅಲ್ಲವೋ. ಅದರ ಉಪದ್ರ ನನಗೆ ಮಾತ್ರ ಗೊತ್ತು ಅಲ್ಲವ.
ದಿಲ್ಲಿಯ ನಾಯ್ಕರು ಹೇಳಿದರೆ ಅದು ಬಿಡುತ್ತದೋ. ನಮ್ಮ ಕೈಗೆ ಎಷ್ಟು ಹೊತ್ತು ಅದು ಅಂಟಿಕೊಂಡಿರುತ್ತದೋ ಅಷ್ಟೂ ಹೊತ್ತು ನಮ್ಮ ಕೈ ಮತ್ತೆ ಮೈ ಎಲ್ಲಾ ಪೆಲಕ್ಕಾಯಿ ಪರಿಮಳ ಬರುತ್ತದೆ. ಹಾಗೆ ನಾವು ಎಲ್ಲಿಯಾದರೂ ಹೊರಗೆ ಜಗಲಿಯಲ್ಲಿ ಕುಳಿತೆವೋ ಅಲ್ಲಿಗೆ ನಾಯಿ ಕೂಡ ಬಂದು ನಮ್ಮನ್ನು ಮೂಸುತ್ತದೆ. ಅದಕ್ಕೆ ಹೇಳುವುದು, ಪೆಲಕ್ಕಾಯಿ ಮೂರಿದವರಿಗೆ ಮಾತ್ರ ಗೊತ್ತು ಅದರ ಸುಖ ಅಥವಾ ದುಃಖ. ನಾವು ಪೆಲಕ್ಕಾಯಿ ಪರಿಮಳ ಬರುತ್ತೇವೆ ಅಂತ ಹೇಳಿ ಇದ್ದ ಕಾಟುನಾಯಿಗಳಿಂದ ಮೂಸಿಸಲ್ಪಡಿಲಿಕ್ಕೆ ಆಗುತ್ತದೋ? ಪೆಲಕ್ಕಾಯಿ ನಾವೆ ಮೂರಿದ್ದು ಎಂದುದರಿಂದ ಅಲ್ಲವೋ ನಾವೇ ಪೆಲಕ್ಕಾಯಿ ಪರಿಮಳ ಬರುವುದು. ಪೆಲಕ್ಕಾಯಿ ತಿಂದವರು ಸ್ವಲ್ಪ ಹೊತ್ತು ಪೆಲಕ್ಕಾಯಿ ಪರಿಮಳ ಬರಬಹುದು. ನಾವು ಮೂರಿದ್ದರಿಂದ ನಾವು ತಿಂದಿದ್ದೇವೆ ಅಂತ ಕಾಟುನಾಯಿ ಕೂಡ ನಮ್ಮನ್ನು ಮೂಸಿಲಿಕ್ಕೆ ಬರುತ್ತದೆ.
ಈ ಮಳೆಗೆ ಎಲ್ಲಿಗೂ ಹೋಗಲಿಕ್ಕೆ ಆಗುವುದಿಲ್ಲ ಎಂದು ಆಚೆ ತೋಟದ ಭಟ್ರು ಮತ್ತು ಈಚೆ ತೋಟದ ಶೆಟ್ರು ಟಿವಿ ನೋಡಿ ನೋಡಿ ಕಣ್ಣು ಕೆಂಪು ಮಾಡಿಕೊಂಡು ಬಯ್ಯದ ಪೊರ್ತುಗು ಮಳೆ ಬಿಟ್ಟಾಗ ನಮ್ಮ ಬಿತ್ತಿಲಿನ ಹತ್ತಿರದಲ್ಲಿ ಮಾತಾಡುವುದು ಕೇಳಿ ನಾನು ಕೂಡ ಅಲ್ಲಿಗೆ ಹೋದರೆ ಅವರು ಎಂತ ಹೇಳುವುದು ಗೊತ್ತುಂಟಾ? ಪೆಲಕ್ಕಾಯಿ ಮೂರಿ ಬಂದದ್ದಾ ಎಂದು. ನಾನು ಹೇಳಿದೆ ನೀವು ಎಂತದ್ದು ಮಾಡಿದ್ದು ಪುಲ್ಯದಿಂದ ಬಯ್ಯ ಮುಟ್ಟ ಎಂದು. ಅವರು ಹೇಳಿದರು: ಮುಖ್ಯಮಂತ್ರಿಗಳು ಯಾವಾಗ ರಾಜೀನಾಮೆ ಕೊಡುತ್ತಾರೆ ಅಂತ ಕಾದು ಕಾದು ಸಾಕಾಯಿತು ಅಂತ. ಕಾದು ಕಾದು ನೀವು ಮುದುಕರಾಗುವಿರಿ. ಅವರು ರಾಜೀನಾಮೆ ಕೊಡುವ ಹಾಗೆ ಕಾಣುವುದಿಲ್ಲ. ಅವರು ಅಧಿಕಾರಕ್ಕೆ ಅಂಟಿದ್ದಾರೆ ಮಾರಾಯ್ರೆ, ನನ್ನ ಮೈಗೆ ಪೆಲಕ್ಕಾಯಿ ಪರಿಮಳ ಅಂಟಿದ ಹಾಗೆ, ಎಂದೆ. ನಾಳೆ ಅಮಾಸೆ ಮುಗಿಯಲಿ. ಮತ್ತೆ ನೋಡುವಾ ಆಯಿತಾ.
Labels:
Current
Saturday, July 23, 2011
ಬಾಜೀರಾವ್ ಸಿಂಗಮ್
ಗೋಲ್ಮಾಲ್ ಸರಣಿ ಚಿತ್ರಗಳನ್ನು ನಿರ್ದೇಶಿಸಿದ ರೋಹಿತ್ ಶೆಟ್ಟಿ ಸಿಂಗಮ್ ಎಂಬ ಮಸಾಲ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಗಮನಸೆಳೆದಿದ್ದಾರೆ. ವಾರದ ದುಡಿಮೆಯ ನಂತರ ರಿಲಾಕ್ಸ್ ಆಗಲು ಮಲ್ಟಿಪ್ಲೆಕ್ಸ್ಗೆ ಹೋಗಿ ಕಾಲು ಚಾಚಿ ಕುಳಿತರೆ ಸಾಕು. ಯಾವುದೇ ಯೋಚನೆ ಮಾಡಬೇಕಾದ ಪ್ರಮೇಯವೇ ಇಲ್ಲ. ಸ್ಲೋಮೋಷನ್ ಆಕ್ಷನ್ ದೃಶ್ಯಗಳು, ಫೈಟ್, ಸ್ಕಾರ್ಪಿಯೋ ಗಾಡಿಗಳ ಹೊಡೆದುರುಳುವ ಆಟ. ಜತೆಗೆ ಮನಸ್ಸಿಗೆ ನಾಟುವ ಡಯಲಾಗ್ ಬಾಜಿ.
ಶಿವಗಢದ ಪೊಲೀಸ್ ಅಧಿಕಾರಿ ಬಾಜಿರಾವ್ ಸಿಂಗಮ್ ನಾಯಕ. ಗೋವಾದ ಡಾನ್ ಜಯಕಾಂತ್ ಶಿಕ್ರೆ ಖಳನಾಯಕ.
ನಾಯಕ ಶಿವಗಢದಿಂದ ಗೋವಾಕ್ಕೆ ವರ್ಗಾವಣೆಯಾದ ನಂತರ ಆಕ್ಷನ್ ದೃಶ್ಯಗಳೂ, ಡಯಲಾಗ್ ಬಾಜಿಯೂ ಹೆಚ್ಚುತ್ತವೆ.
ನಿರಾಳ ವಾರಾಂತ್ಯಕ್ಕೆ ಮುನ್ನುಡಿಯಾಗಿತ್ತು ಸಿಂಗಮ್!
***
ತುಳುನಾಡಿನ ಮೂಲದ ಫೈಟರ್ (ಎಂ.ಬಿ.)ಶೆಟ್ಟಿಯವರ ಮಗ ರೋಹಿತ್ ಶೆಟ್ಟಿ ಮತ್ತು ತುಳುನಾಡಿನ ಇನ್ನೋರ್ವ ಸಮಕಾಲೀನ ಪ್ರತಿಭಾವಂತ ನಟ ಪ್ರಕಾಶ್ ರೈ (ರಾಜ್) ರಿರುವ ಈ ಸಿನಿಮಾದಲ್ಲಿ ಒಂದು ಪೂರ್ಣ ಪ್ರಮಾಣದ ದೃಶ್ಯದಲ್ಲಿ ತುಳುಭಾಷೆಯನ್ನು ಉಪಯೋಗಿಸಲಾಗಿದೆ. ಮುಂಬಯಿಯಲ್ಲಿರುವ ತುಳುವರ ಪ್ರಭಾವ ಬಾಲಿವುಡ್ ಸಿನಿಮಾದಲ್ಲಿ ಅಪಾರ.
***
ಚಿತ್ರದ ಕಾಲ: ಸಮಕಾಲೀನ; ಕಥೆ ನಡೆಯುವ ಸ್ಥಳ: ಮಹಾರಾಷ್ಟ್ರ, ಕರ್ನಾಟಕ ಗಡಿಯಲ್ಲಿರುವ ಗೋವಾದಲ್ಲಿ.
ಚಿತ್ರದ ಸಂಭಾಷಣೆಯೊಂದನ್ನು ಕುರಿತು ಕನ್ನಡಿಗರಿಗೆ ನೋವಾಗಿದೆ ಎಂದು ಕ.ರ.ವೇ. ಗದ್ದಲವೆಬ್ಬಿಸಿದೆ.
***
ಹೊರನಾಡಿನ, ಮುಖ್ಯವಾಗಿ ಮುಂಬಯಿಯ ಕನ್ನಡಿಗರು ಹೆಮ್ಮೆ ಪಡುವ ರೋಹಿತ್ ಶೆಟ್ಟಿ ಹಾಗೂ ಪ್ರಕಾಶ್ ರೈ ಅವರ ಚಿತ್ರಕ್ಕೆ ಹಾರ್ದಿಕ ಶುಭಾಶಯಗಳು.
***
ಉಳಿದಂತೆ "ಕುತ್ತೋಂ ಕಿ ಝುಂಡ್ ಜಿತ್ನೀಭೀ ಬಡೀ ಹೋ, ಉನ್ ಕೇ ಲಿಯೇ ಏಕ್ ಶೇರ್ ಕಾಫಿ ಹೈ"!
ಇಲ್ಲಿ ಬೊಗಳುವವರನ್ನು ನಾಯಿಗಳೆಂದು ಯಾರಾದರೂ ಗುರುತಿಸಿಕೊಂಡರೆ ಖಾಲಿ ತಲೆಯಲ್ಲಿ ಚಿತ್ರ ನೋಡಿ ಬಂದವರ ತಪ್ಪಿಲ್ಲವಲ್ಲ!
ಒಲವಿನಿಂದ
ಬಾನಾಡಿ
ಶಿವಗಢದ ಪೊಲೀಸ್ ಅಧಿಕಾರಿ ಬಾಜಿರಾವ್ ಸಿಂಗಮ್ ನಾಯಕ. ಗೋವಾದ ಡಾನ್ ಜಯಕಾಂತ್ ಶಿಕ್ರೆ ಖಳನಾಯಕ.
ನಾಯಕ ಶಿವಗಢದಿಂದ ಗೋವಾಕ್ಕೆ ವರ್ಗಾವಣೆಯಾದ ನಂತರ ಆಕ್ಷನ್ ದೃಶ್ಯಗಳೂ, ಡಯಲಾಗ್ ಬಾಜಿಯೂ ಹೆಚ್ಚುತ್ತವೆ.
ನಿರಾಳ ವಾರಾಂತ್ಯಕ್ಕೆ ಮುನ್ನುಡಿಯಾಗಿತ್ತು ಸಿಂಗಮ್!
***
ತುಳುನಾಡಿನ ಮೂಲದ ಫೈಟರ್ (ಎಂ.ಬಿ.)ಶೆಟ್ಟಿಯವರ ಮಗ ರೋಹಿತ್ ಶೆಟ್ಟಿ ಮತ್ತು ತುಳುನಾಡಿನ ಇನ್ನೋರ್ವ ಸಮಕಾಲೀನ ಪ್ರತಿಭಾವಂತ ನಟ ಪ್ರಕಾಶ್ ರೈ (ರಾಜ್) ರಿರುವ ಈ ಸಿನಿಮಾದಲ್ಲಿ ಒಂದು ಪೂರ್ಣ ಪ್ರಮಾಣದ ದೃಶ್ಯದಲ್ಲಿ ತುಳುಭಾಷೆಯನ್ನು ಉಪಯೋಗಿಸಲಾಗಿದೆ. ಮುಂಬಯಿಯಲ್ಲಿರುವ ತುಳುವರ ಪ್ರಭಾವ ಬಾಲಿವುಡ್ ಸಿನಿಮಾದಲ್ಲಿ ಅಪಾರ.
***
ಚಿತ್ರದ ಕಾಲ: ಸಮಕಾಲೀನ; ಕಥೆ ನಡೆಯುವ ಸ್ಥಳ: ಮಹಾರಾಷ್ಟ್ರ, ಕರ್ನಾಟಕ ಗಡಿಯಲ್ಲಿರುವ ಗೋವಾದಲ್ಲಿ.
ಚಿತ್ರದ ಸಂಭಾಷಣೆಯೊಂದನ್ನು ಕುರಿತು ಕನ್ನಡಿಗರಿಗೆ ನೋವಾಗಿದೆ ಎಂದು ಕ.ರ.ವೇ. ಗದ್ದಲವೆಬ್ಬಿಸಿದೆ.
***
ಹೊರನಾಡಿನ, ಮುಖ್ಯವಾಗಿ ಮುಂಬಯಿಯ ಕನ್ನಡಿಗರು ಹೆಮ್ಮೆ ಪಡುವ ರೋಹಿತ್ ಶೆಟ್ಟಿ ಹಾಗೂ ಪ್ರಕಾಶ್ ರೈ ಅವರ ಚಿತ್ರಕ್ಕೆ ಹಾರ್ದಿಕ ಶುಭಾಶಯಗಳು.
***
ಉಳಿದಂತೆ "ಕುತ್ತೋಂ ಕಿ ಝುಂಡ್ ಜಿತ್ನೀಭೀ ಬಡೀ ಹೋ, ಉನ್ ಕೇ ಲಿಯೇ ಏಕ್ ಶೇರ್ ಕಾಫಿ ಹೈ"!
ಇಲ್ಲಿ ಬೊಗಳುವವರನ್ನು ನಾಯಿಗಳೆಂದು ಯಾರಾದರೂ ಗುರುತಿಸಿಕೊಂಡರೆ ಖಾಲಿ ತಲೆಯಲ್ಲಿ ಚಿತ್ರ ನೋಡಿ ಬಂದವರ ತಪ್ಪಿಲ್ಲವಲ್ಲ!
ಒಲವಿನಿಂದ
ಬಾನಾಡಿ
Labels:
Film
Subscribe to:
Posts (Atom)






